ದಾವಣಗೆರೆ: ಜ.10ರಂದು ಭವಿಷ್ಯ ನಿಧಿ ಅದಾಲತ್

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಇಪಿಎಫ್, ಇಪಿಎಸ್ ಸದಸ್ಯರಿಗೆ ನಿಧಿ ಆಪ್ಕೆ ನಿಕಟ್, ಭವಿಷ್ಶ ನಿಧಿ ಅದಾಲತ್ ಅನ್ನು ಪ್ರಾದೇಶಿಕ ಕಛೇರಿ ಶಿವಮೊಗ್ಗದಲ್ಲಿ ಜ.10 ರಂದು ಆಯೋಜಿಸಲಾಗಿದೆ.

ಉದ್ಯೋಗದಾತರು ಮತ್ತು ಟ್ರೆಡ್ ಯೂನಿಯನ್, ಸದಸ್ಯರು, ಪಿಂಚಣಿದಾರರು, ಅದಾಲತ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಚಂದಾದಾರರು ಪಿ.ಎಫ್ ಸದಸ್ಯರು, ಪಿಂಚಣಿದಾರರಿಗೆ ಬೆ. 11 ರಿಂದ 12ರ ವರೆಗೆ ಮತ್ತು ಉದ್ಯೋಗದಾತರಿಗೆ 12 ರಿಂದ 01 ಗಂಟೆಯವರೆಗೆ ಅದಾಲತ್ ನಡೆಯಲಿದೆ.

ಪಿಂಚಣಿದಾರರು ಮತ್ತು ಉದ್ಯೋಗದಾತರು ಕುಂದು ಕೊರತೆಯ ವಿವರಗಳನ್ನು ಪಿಎಫ್ ಖಾತೆ ಸಂಖ್ಯೆ, ಪಿಂಚಣಿ ಸಂಖ್ಯೆ, ಸಂಸ್ಥೆಯ ಕೋಡ್ ನಂಬರ್, ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯೊಂದಿಗೆ ಮುಂಚಿತವಾಗಿ ಒದಗಿಸುವಂತೆ ಸೂಚಿಸಲಾಗಿದೆ.

ವಿವರಗಳನ್ನು ದಿ.07 ರಂದು ಅಥವಾ ಮೊದಲು ಇಮೇಲ್ ಐಡಿ ro.shivamogga@epfindia.gov.in ಗೆಕಳುಹಿಸಬಹುದೆಂದು ಪ್ರಾದೇಶಿಕ ಭವಿಷ್ಶ ನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಭವಿಷ್ಶ ನಿಧಿ ಭವನ, ಅಟಲ್ ಬಿಹಾರಿ ವಾಜಪೇಯಿ ಲೇಔಟ್, ಮಲ್ಲಿಗೇನಹಳ್ಳಿ, ಶಿವಮೊಗ್ಗ ಇಲ್ಲಿಗೆ ಸಂಪರ್ಕಿಸಬಹುದು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *