ದಾವಣಗೆರೆ: ಜುಲೈ.11 ರಂದು ಶಿವಮೊಗ್ಗದ ಮಲ್ಲಿಗೇನಹಳ್ಳಿಯ ಭವಿಷ್ಯ ನಿಧಿ ಕಚೇರಿಯಲ್ಲಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಇ.ಪಿ.ಎಫ್/ಇ.ಪಿ.ಎಸ್ ಸದಸ್ಯರಿಗಾಗಿ ಭವಿಷ್ಯ ನಿಧಿ ಅದಾಲತ್ ಆಯೋಜಿಸಲಾಗಿದೆ. ಉದ್ಯೋಗದಾತರು ಮತ್ತು ಟ್ರೆಡ್ ಯೂನಿಯನ್, ಸದಸ್ಯರು, ಪಿಂಚಣಿದಾರರು, ಅದಾಲತ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಚಂದಾದಾರರು, ಪಿ.ಎಫ್ ಸದಸ್ಯರು, ಪಿಂಚಣಿದಾರರು ಅಂದು ಬೆ.11 ಗಂಟೆಯಿಂದ 12 ರವೆರೆಗೆ ಹಾಗೂ ಉದ್ಯೋಗದಾತರು ಮ.12 ರಿಂದ 01 ರವರೆಗೆ ಅದಾಲತ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಪಿ.ಎಫ್ ಸದಸ್ಯರು, ಪಿಂಚಣಿದಾರರು, ಟ್ರೆಡ್ ಯೂನಿಯನ್ ಮತ್ತು ಉದ್ಯೋಗದಾತರು ಕುಂದು ಕೊರತೆಯ ವಿವರಗಳನ್ನು ಜು.08 ರೊಳಗೆ ಇಮೇಲ್ ಐಡಿ: ro.shivamogga@epfindia.gov.in ಗೆ ಪಿ.ಎಫ್ ಅಕೌಂಟ್ ಸಂಖ್ಯೆ, ಪಿಂಚಣಿ ಸಂಖ್ಯೆ, ಸಂಸ್ಥೆಯ ಕೋಡ್ ನಂಬರ್, ಹೆಸರು ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯೊಂದಿಗೆ ಮುಂಚಿತವಾಗಿ ಒದಗಿಸುವಂತೆ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



