Connect with us

Dvgsuddi Kannada | online news portal | Kannada news online

ಕೊಟ್ಟೂರಿನ ಉಜ್ಜಯಿನಿ ರಸ್ತೆಯ 105 ಎಕರೆ ಪ್ರದೇಶದಲ್ಲಿ ಜ.28 ರಿಂದ ತರಳಬಾಳು ಹುಣ್ಣಿಮೆ ಮಹೋತ್ಸವ

images 8 28

ಪ್ರಮುಖ ಸುದ್ದಿ

ಕೊಟ್ಟೂರಿನ ಉಜ್ಜಯಿನಿ ರಸ್ತೆಯ 105 ಎಕರೆ ಪ್ರದೇಶದಲ್ಲಿ ಜ.28 ರಿಂದ ತರಳಬಾಳು ಹುಣ್ಣಿಮೆ ಮಹೋತ್ಸವ

ಕೊಟ್ಟೂರು; ಈ ಬಾರಿ ಐತಿಹಾಸಿಕ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಉಜ್ಜಯಿನಿ ರಸ್ತೆಯ ಮರುಳಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ 105 ಎಕರೆಯ ವಿಸ್ತಾರ ಪ್ರದೇಶದಲ್ಲಿ ಭಕ್ತರಿಗೆ ಎಲ್ಲ ಸೌಕರ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಡಾ. ಬಿ.ಸಿ. ಮೂಗಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಅವರು, ಇದೇ 2023 ರ ಜನವರಿ 28 ರಿಂದ ಬರುವ ಫೆಬ್ರುವರಿ 5ರವರೆಗೆ ನಡೆಯುವ ಒಂಭತ್ತು ದಿನಗಳ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರ ಸಮೂಹ ಆಗಮಿಸುತ್ತಿದ್ದು, ಸರ್ವ ಜನಾಂಗದ ಸುಂದರವಾದ ಚಲಿಸುವ ವಿಶ್ವವಿದ್ಯಾನಿಲಯವೇ ತರಳು ಬಾಳು ಹುಣ್ಣಿಮೆ. ಪ್ರತಿಯೊಬ್ಬರೂ ತಪ್ಪದೇ ನೋ ಡಬೇಕಾದ ಕಾರ್ಯಕ್ರಮದಲ್ಲಿ ಜಾತಿ ಭೇದವಿಲ್ಲದೆ ಕ್ರೈಸ್ತ, ಮುಸ್ಲಿಂ, ಹಿಂದೂ, ಜೈನ ಜನಾಂಗದ ಪೂಜ್ಯ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಎಲ್ಲಾ ಜನಾಂಗದ ಧರ್ಮಗಳ ಧಾರ್ಮಿಕ ಭಾವನೆ ಕಾರ್ಯಕ್ರಮವೇ ತರಳಬಾಳು ಹುಣ್ಣಿಮೆ 9 ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಬಳ್ಳಾರಿ ವಿಜಯನಗರ ಜಿಲ್ಲೆಯ, ತಾಲ್ಲೂಕಿನ ಭಕ್ತರಿಂದ ಒಂದು ಕೋ ಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. ಈ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು. ಕೃಷಿ ತಜ್ಞರು. ಸಂಸ್ಕೃತಿಕ ವಿಭಾಗದ ಗಣ್ಯರು, ಸಾಹಿತಿಗಳು, ಜನಪದ ಸಾಹಿತಿಗಳು, ಎಲ್ಲಾ ಜನಾಂಗದ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಬಿ.ಸಿ. ಮೂಗಪ್ಪ, ಉಪಾಧ್ಯಕ್ಷ ಬೋರ್ ವೆಲ್ ಮಂಜಣ್ಣ, ಕಾರ್ಯದರ್ಶಿ ತಿಮ್ಲಾಪುರದ ಕೊಟ್ರೇಶ್, ಸವಾಜಿ ರಾಜೇಂದ್ರ ಪ್ರಸಾದ್, ಈಶ್ವರಪ್ಪ, ಭೋಜರಾಜ್, ಕೆ.ಎನ್ ಕೊಟ್ರೇಶ್, ರಾಘವೇಂದ್ರ, ನಾಗರಕಟ್ಟಿ ಮಾರುತಿ, ತೂಲಹಳ್ಳಿ ಮಂಜುನಾಥ ಗೌಡ್ರು, ಹನುಮನಹಳ್ಳಿ ಭರ್ಮಗೌಡ್ರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top