Connect with us

Dvgsuddi Kannada | online news portal | Kannada news online

ದಾವಣಗೆರೆ ಮೂಲದ ಇಬ್ಬರ ಭೀಕರ ಹತ್ಯೆ : ಮೂವರ ವಶ

images 60

ದಾವಣಗೆರೆ

ದಾವಣಗೆರೆ ಮೂಲದ ಇಬ್ಬರ ಭೀಕರ ಹತ್ಯೆ : ಮೂವರ ವಶ

ಶಿವಮೊಗ್ಗ; ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿ ಬಡಾವಣೆಯ ಪುತ್ತಿಗೆ ಮಠದ ಸಮೀಪ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನದಲ್ಲಿ ದಾವಣಗೆರೆ ಮೂಲದ ಇಬ್ಬರು ಕಾರ್ಮಿಕರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ದಾವಣಗೆರೆ ಜಿಲ್ಲೆಯ ಬೀರಪ್ಪ (30) ಮ೦ಜಪ್ಪ (45) ಕೊಲೆಯಾದ ದುರ್ದೈವಿ‌ಗಳಾಗುದ್ದಾರೆ. ಈ ಘಟನೆ ನಡೆದಿರುವ ಸಮುದಾಯ ಭವನಕ್ಕೆ ಗ್ರಾನೈಟ್ ಅಳವಡಿಸಲು ಬಂದವರಾಗಿದ್ದಾರೆ. ಈ ತಂಡದಲ್ಲಿ ಐದು ಮಂದಿ ಕಾರ್ಮಿಕರಿದ್ದು, ಇವರಲ್ಲಿ ಒಬ್ಬಾತ ರಾಜಣ್ಣ (60)
ತಾನೇ ಇಬ್ಬರನ್ನೂ ಪಿಕಾಸಿಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಬುಧವಾರ ರಾತ್ರಿ ಬೀರಪ್ಪ ಮತ್ತುಮ೦ಜಪ್ಪ ಕುಡಿದ ಮತ್ತಿನಲ್ಲಿ ಅಡುಗೆ ಮಾಡಿ ಹಾಕುವಂತೆ ನನಗೆ ಹಿಂಸೆ ನೀಡಿದ್ದರು. ಇದೇ ಕಾರಣಕ್ಕೆ ಅವರಿಬ್ಬರೂ‌ ನಿದ್ದೆ ಮಾಡಿದ್ದ ವೇಳೆ ಪಿಕಾಸಿಯಿಂದ ಅವರ ತಲೆಗೆ ಹೊಡೆದು ಸಾಯಿಸಿದ್ದೇನೆ ಎಂದು ರಾಜಣ್ಣ ಹೇಳಿ
ಕೊಂಡಿದ್ದಾನೆ ಎನ್ನಲಾಗಿದೆ. ಒಂದು ಶವ ಕಟ್ಟಡದ ಒಳಗಡೆ ಇದ್ದು, ಇನ್ನೊಂದು ಶವ ಕಟ್ಟಡದ ತಾರಸಿ ಮೇಲೆ ಬಿದ್ದಿದೆ. ಮುಂದಿನ ವಾರ ಈ ಸಮುದಾಯ ಭವನವನ್ನು ಉದ್ಘಾಟನೆ ಮಾಡಲು ಸಿದ್ಧತೆಯೂ
ನಡೆದಿತ್ತು. ಪ್ರಕರಣದಲ್ಲಿ ರಾಜಣ್ಣ
ಸೇರಿ ಉಳಿದ ಮೂವರ ವಶಕ್ಕೆ ತೆಗೆದುಕೊಂಡಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top