ದಾವಣಗೆರೆ; ಅಭ್ಯರ್ಥಿಗಳು ಟಿವಿ, ಪೇಪರ್, ಡಿಜಿಟಲ್, ಸೋಶಿಯಲ್ ಮೀಡಿಯಾ ಜಾಹೀರಾತು ಪ್ರಚಾರಕ್ಕೆ ಪೂರ್ವಾನುಮತಿ ಕಡ್ಡಾಯ; ಡಿಸಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ದಾವಣಗೆರೆ: ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಟಿವಿ, ಪೇಪರ್, ಡಿಜಿಟಲ್, ಸೋಶಿಯಲ್ ಮೀಡಿಯಾ ಜಾಹೀರಾತು ಪ್ರಚಾರಕ್ಕೆ ಮಾಧ್ಯಮ ಪ್ರಮಾಣಪತ್ರ ಮೇಲ್ವಿಚಾರಣೆ ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಡಿಸಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಪಾಶಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಧಾನಸಭೆ ಚುನಾವಣೆ ಅಂಗವಾಗಿಮುದ್ರಣಾಲಯದ ಮಾಲೀಕರು ಹಾಗೂ ಲೋಕಲ್ ಕೇಬಲ್ ಟಿವಿ ಆಪರೇಟರ್‌ಗಳ ಸಭೆಯಲ್ಲಿ ಮಾತನಾಡಿ, ಯಾವುದೇ ರಾಜಕೀಯ ಪಕ್ಷದವರು, ಅಭ್ಯರ್ಥಿ ಮುದ್ರಿಸಿದ ಪ್ರತಿಗಳ ಸಂಖ್ಯೆ ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದರು.

ವಿಧಾನಸಭಾ ಚುನಾವಣೆ ಪ್ರಚಾರ ಸಾಮಗ್ರಿ ಹಾಗೂ ಕೇಬಲ್ ಟಿ.ವಿ ಸೇರಿ ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತುಗಳ ಪ್ರಸಾರಕ್ಕೆ ಮುನ್ನಾ ಪೂರ್ವಾನುಮತಿ ಕಡ್ಡಾಯ. ಚುನಾವಣಾ ಆಯೋಗದ ಮಾದರಿ ನೀತಿಸಂಹಿತೆ ಪಾಲಿಸಬೇಕು.ಮುದ್ರಣ‌ಆದೇಶ ನೀಡಿದ ಕಡ್ಡಾಯವಾಗಿ ಪಾಲಿಸಬೇಕು.ಅಭ್ಯರ್ಥಿಯ ಘೋಷಣೆಯ ದ್ವಿಪ್ರತಿಯಲ್ಲಿ ಪಡೆದು ಹಾಗೂ ಈ ಘೋಷಣೆಗೆ ಇಬ್ಬರು ಸಾಕ್ಷಿದಾರರ ರುಜು ಪಡೆದುಕೊಳ್ಳಬೇಕು. ಮುದ್ರಣಮಾಡಿದ ಎರಡು ದಿನದೊಳಗಾಗಿ ಘೋಷಣೆ ಮತ್ತು ಮುದ್ರಿಸಿದ ಪ್ರಚಾರ ಸಾಮಗ್ರಿಯ ಒಂದು ಪ್ರತಿಯೊಂದಿಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು. ಚುನಾವಣಾ ಕರ್ತವ್ಯ ನಿರತ ಯಾವುದೇ ಅಧಿಕಾರಿ ಮಾಹಿತಿಕೇಳಿದಾಗ ತಕ್ಷಣ ನೀಡಬೇಕು ಎಂದರು.

ವೆಚ್ಚದ ವಿವರ ನೀಡಿ: ಸ್ಥಳೀಯ ಕೇಬಲ್ ಆಪರೇಟರ್‌ಗಳು ಯಾವುದೇ ಪಕ್ಷ ಹಾಗೂ ಅಭ್ಯರ್ಥಿಯು ಜಾಹೀರಾತಿನಲ್ಲಿ ಬಳಸಲಾಗಿರುವ ವಿವರ( ಕಂಟೆಂಟ್) ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಯಿ೦ದ ಪೂರ್ವಾನುಮತಿ ಕಡ್ಡಾಯವಾಗಿ ಪಡೆದಿರಬೇಕು. ಕೇಬಲ್ ಆಪರೇಟರ್‌ಗಳು ಈ‌ರೀತಿ ಪೂರ್ವಾನುಮತಿ ಪಡೆಯದ ಯಾವುದೇ ಜಾಹೀರಾತು ಬಿತ್ತರಿಸುವಂತಿಲ್ಲ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ತಾಲೂಕುಗಳಲ್ಲಿ ಹಾಗೂ ಎಲ್ಲ ಸ್ಥಳೀಯ ಕೇಬಲ್ ಆಪರೇಟರ್‌ಗಳು ತಮ್ಮ ವಾಹಿನಿ,
ಚಾನಲ್, ಕೇಬಲ್‌ನೆಟ್‌ವರ್ಕ್‌ನಲ್ಲಿ ಬಿತ್ತರಿಸಿದ ಎಲ್ಲ ಜಾಹೀರಾತುಗಳ ಮಾಹಿತಿ ಮತ್ತು ಅದಕ್ಕೆ ವಿಧಿಸಲಾಗಿರುವ ವೆಚ್ಚದ ವಿವರ ಕಡ್ಡಾಯವಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಹಾಗೂ ಆಯಾ ತಾಲೂಕಿನ ಕ್ಷೇತ್ರದ ಚುನಾವಣಾಧಿಕಾರಿಗಳ ಗಮನಕ್ಕೆ ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು.

ಕೇಬಲ್ ಆಪರೇಟ್‌ಗಳು ವಿದ್ಯುನ್ಮಾನ ಮಾಧ್ಯಮವು ಸೋಷಿಯಲ್ ಮೀಡಿಯಾ ಒಳಗೊಂಡಿರುವುದರಿ೦ದ ಈ ಸಾಮಾಜಿಕ ಜಾಲತಾಣ(ವೆಬ್ ಸೈಟ್ ಇತ್ಯಾದಿ)ಗಳಲ್ಲಿ ಬಿತ್ತರಿಸುವ ಅಂಶವು ಸಹ‌ ಎಂಸಿಎಂಸಿ (ಮಾಧ್ಯಮ ಪ್ರಮಾಣಪತ್ರ ಮೇಲ್ವಿಚಾರಣೆ ಸಮಿತಿ) ಯಿಂದ ಪೂರ್ವಾನುಮತಿ ಪಡೆಯಬೇಕು. ಯಾವುದೇ ಪಕ್ಷ ಹಾಗೂ ಅಭ್ಯರ್ಥಿಯು ವಿಧಾನಸಭಾ ಚುನಾವಣೆಯ ಕುರಿತು ಮುದ್ರಿಸುವ ಕರಪತ್ರ, ಪಾಂಪ್ಲೆಂಟ್ ಮುಂತಾದವುಗಳು ದೂರು ಸಲ್ಲಿಸಲು ಮುದ್ರಣಕ್ಕೆ ಆದೇಶ ನೀಡಿದವರ ಪ್ರಿಂಟರ್ ಕಂಟ್ರೋಲ್ ರೂಂ ಮುದ್ರಿಸುವ ಪ್ರತಿ ಕರಪತ್ರಗಳ ಮೇಲೆಯು ಮುದ್ರಕರ ಮತ್ತು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಕರಪತ್ರಗಳ ಸಂಖ್ಯೆ ನಮೂದಿಸಬೇಕು.

ವಿವರಗಳಿಲ್ಲದೆ ಯಾವುದೇ ಕರಪತ್ರ ಮುದ್ರಣ ಚುನಾವಣಾ ಅಪರಾಧ. ಯಾವುದೇ ಪತ್ರಿಕಾ ಮುದ್ರಣ ಮಾಲೀಕರಿಗೆ ಮುದ್ರಣಕ್ಕೆ ಸಂಬಂಧಿಸಿ ಏನಾದರು ಸಮಸ್ಯೆ ಯಾದಲ್ಲಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರ ಹಾಗೂ 107 – ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಸಂಬಂಧಿಸಿ ಚುನಾವಣಾ
ದೂರುಗಳನ್ನು ಸಲ್ಲಿಸಲು ಕಂಟ್ರೋಲ್ ರೂ೦
ಗಳ ಸ್ಥಾಪಿಸಲಾಗಿದೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಂಟ್ರೋಲ್ ರೂಮ್ ದೂ. ಸಂ-08192-213368 ಹಾಗೂ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಂಟ್ರೋಲ್ ರೂಂ ದೂ.ಸಂ-08192-213369 ಗೆ ಕರೆ ಮಾಡಿದೂರು ಸಲ್ಲಿಸಬಹುದು. ಕಾಯ್ದೆ 1951 ಸೆಕ್ಷನ್ 127ಎಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುದ್ರಣಾಲಯದ ಮಾಲೀಕರು ಅನುಬಂಧ
(ಅನೆಕ್ಸ‌-ಎ) ನಲ್ಲಿ ಮಾಹಿತಿ ಪಡೆಯಬೇಕು,
ನಂತರ(ಅನೆಕ್ಸರ್ -ಬಿ)ನೇದ್ದೆಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿಸಲ್ಲಿಸಬೇಕು. ಈನಿಯಮಗಳನ್ನು ಮುದ್ರಣಾಲಯದ ಮಾಲೀಕರು ಹಾಗೂ ಕೇಬಲ್ ಆಪರೇಟರ್‌ಗಳು ಕಟ್ಟುನಿಟ್ಟಾಗಿ ಪಾಲಿಸಬೇಕು.ತಪ್ಪಿದಲ್ಲಿ ಅಥವಾಉಲ್ಲಂಘನೆಯಾದಲ್ಲಿ ಅಂತಹವರ ವಿರುದ್ಧ ಪ್ರಜಾಪ್ರಾತಿನಿಧ್ಯ ಕಾಯ್ದೆ ಪ್ರಕಾರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದುಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ನಷ್ಮಾ, ಇತರರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *