ದಾವಣಗೆರೆ: ಎಳೆ ಅಲಸಂದೆ ಬಳ್ಳಿ ತಿಂದ ಪರಿಣಾಮ 35 ಕುರಿಗಳು ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಒಂಟಿಹಾಳ್ ಗ್ರಾಮದಲ್ಲಿ ನಡೆದಿದೆ.
ಅಡಿಕೆ ತೋಟದಲ್ಲಿ ಬೆಳೆದಿದ್ದ ಎಳೆಯ ಅಲಸಂದಿ ಬಳ್ಳಿಯನ್ನು ಕುರಿಗಳು ತಿಅಮದಿವೆ. ಇದ್ದಕ್ಕಿದ್ದಂತೆ ಒಂದಾದರೊಂದಂತೆ ಸಾವನ್ನಪ್ಪಿವೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪರುಶುರಾಂಪುರ ಗ್ರಾಮದ ನಿವಾಸಿ ಮಂಜಪ್ಪ, ಶಿವಣ್ಣ, ಕರಿಯಪ್ಪ, ಚಿದಾನಂದ, ಈರಣ್ಣ ಎಂಬುವರು ಕುರಿಗಳನ್ನು ಕಳೆದುಕೊಂಡವರಾಗಿದ್ದಾರೆ.
ಐವತ್ತಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ. ಸರಿಯಾದ ಸಮಯಕ್ಕೆ ಪಶು ವೈದ್ಯರು ಆಗಮಿಸಿ, ಚಿಕಿತ್ಸೆ ನೀಡಿದ ಪರಿಣಾಮ ಹಲವು ಕುರಿಗಳು ಪ್ರಾಣಾಪಾಯದಿಂದ ಪಾರಾಗಿವೆ.ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿವೆ.



