Connect with us

Dvgsuddi Kannada | online news portal | Kannada news online

ದಾವಣಗೆರೆ: ಮಲೇಬೆನ್ನೂರು ಪುರಸಭೆ ಚುನಾವಣೆ ಅಧಿಸೂಚನೆ ಪ್ರಕಟ; ಡಿ.27 ರಂದು ಮತದಾನ

Voting NE 1

ದಾವಣಗೆರೆ

ದಾವಣಗೆರೆ: ಮಲೇಬೆನ್ನೂರು ಪುರಸಭೆ ಚುನಾವಣೆ ಅಧಿಸೂಚನೆ ಪ್ರಕಟ; ಡಿ.27 ರಂದು ಮತದಾನ

ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕು ಮಲೇಬೆನ್ನೂರು ಪುರಸಭೆಯ 23 ವಾರ್ಡ್‍ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಸಲುವಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಡಿ.15 ಕೊನೆಯ ದಿನವಾಗಿದೆ. ಡಿ.16 ರಂದು ನಾಮಪತ್ರಗಳ ಪರಿಶೀಲಿಸಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಡಿ.18 ಕೊನೆಯ ದಿನ. ಮತದಾನ ಅವಶ್ಯವಿದ್ದರೆ ಮತದಾನವನ್ನು ಡಿ.27 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಡಿ.30 ರೊಳಗೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಮಲೆಬೆನ್ನೂರು ಪುರಸಭೆಯ 23 ವಾರ್ಡ್‍ಗಳ ಸಂಖ್ಯೆ ಹಾಗೂ ಹೆಸರು ಮತ್ತು ಮೀಸಲಾತಿ ಪ್ರಕಟಿಸಲಾಗಿದ್ದು, ವಿವರ ಇಂತಿದೆ. ವಾರ್ಡ್ ಸಂಖ್ಯೆ-01-ಕಲ್ಲುಭಾವಿ ಬಡಾವಣೆ-ಸಾಮಾನ್ಯ. ವಾರ್ಡ್ ಸಂಖ್ಯೆ-2 ಸೊಪ್ಪಿನರಕೇರಿ ಮತ್ತು ಬೀರಲಿಂಗೇಶ್ವರ ಬಡಾವಣೆ-ಹಿಂದುಳಿದ ವರ್ಗ-ಎ(ಮಹಿಳೆ). ವಾರ್ಡ್ ಸಂಖ್ಯೆ-03 ಮಾರುತಿ ಬೀದಿ ಬಡಾವಣೆ- ಸಾಮಾನ್ಯ. ವಾರ್ಡ್ ಸಂಖ್ಯೆ-04 ದೇಶಪಾಂಡೆ ಬಡಾವಣೆ -ಹಿಂದುಳಿದ ವರ್ಗ-ಬಿ(ಮಹಿಳೆ). ವಾರ್ಡ್ ಸಂಖ್ಯೆ-05 ಪಿಡಬ್ಲ್ಯೂಡಿ ಶಾಲೆ ಹಿಂಭಾಗದ ಬಡಾವಣೆ-ಸಾಮಾನ್ಯ (ಮಹಿಳೆ). ವಾರ್ಡ್ ಸಂಖ್ಯೆ-06 ಕೆ.ಈ.ಬಿ ಮತ್ತು ಪಿಡಬ್ಲ್ಯೂಡಿ ಬಡಾವಣೆ-ಹಿಂದುಳಿದ ವರ್ಗ-ಎ. ವಾರ್ಡ್ ಸಂಖ್ಯೆ-07 ವಾಲ್ಮೀಕಿ ಬಡಾವಣೆ-ಹಿಂದುಳಿದ ವರ್ಗ-ಬಿ. ವಾರ್ಡ್ ಸಂಖ್ಯೆ-08 ಕುರುವತ್ತಿ ಸಾಮಿಲ್ ಬಡಾವಣೆ-ಹಿಂದುಳಿದ ವರ್ಗ-ಎ(ಮಹಿಳೆ). ವಾರ್ಡ್ ಸಂಖ್ಯೆ-09 ದಾದಾಪೀರ್ ಸಾಬ್-ಪರಿಶಿಷ್ಟ ಜಾತಿ(ಮಹಿಳೆ). ವಾರ್ಡ್ ಸಂಖ್ಯೆ-10 ಮೇದೂರ್ ಗಲ್ಲಿ ಬಡಾವಣೆ-ಪರಿಶಿಷ್ಟ ಜಾತಿ(ಮಹಿಳೆ). ವಾರ್ಡ್ ಸಂಖ್ಯೆ-11 ಭೋವಿ ಕಾಲೋನಿ ಬಡಾವಣೆ-ಸಾಮಾನ್ಯ. ವಾರ್ಡ್ ಸಂಖ್ಯೆ-12 ಬಸ್ ಸ್ಟ್ಯಾಂಡ್ ಹಿಂಭಾಗದ ಬಡಾವಣೆ-ಸಾಮಾನ್ಯ(ಮಹಿಳೆ). ವಾರ್ಡ್ ಸಂಖ್ಯೆ-13 ಕೆರೆಮೈದಾನ ಬಡಾವಣೆ-ಹಿಂದುಳಿದ ವರ್ಗ-ಎ. ವಾರ್ಡ್ ಸಂಖ್ಯೆ-14 ಗೌಸ್ ನಗರ-ಸಾಮಾನ್ಯ(ಮಹಿಳೆ). ವಾರ್ಡ್ ಸಂಖ್ಯೆ-15 ಟಿಪ್ಪುನಗರ-ಹಿಂದುಳಿದ ವರ್ಗ-ಎ(ಮಹಿಳೆ). ವಾರ್ಡ್ ಸಂಖ್ಯೆ-16 ಬಸವೇಶ್ವರ ಬಡಾವಣೆ-01-ಸಾಮಾನ್ಯ. ವಾರ್ಡ್ ಸಂಖ್ಯೆ-17-ಬಸವೇಶ್ವರ ಬಡಾವಣೆ-02 ಸಾಮಾನ್ಯ(ಮಹಿಳೆ). ವಾರ್ಡ್ ಸಂಖ್ಯೆ-18 ಬಸವೇಶ್ವರ ಬಡಾವಣೆ-03-ಹಿಂದುಳಿದ ವರ್ಗ-ಎ. ವಾರ್ಡ್ ಸಂಖ್ಯೆ-19 ಬಸವೇಶ್ವರ ಬಡಾವಣೆ-04 -ಸಾಮಾನ್ಯ(ಮಹಿಳೆ). ವಾರ್ಡ್ ಸಂಖ್ಯೆ-20 ಅಜಾದ್ ನಗರ-01-ಸಾಮಾನ್ಯ. ವಾರ್ಡ್ ಸಂಖ್ಯೆ-21 ಅಜಾದ್ ನಗರ-02-ಸಾಮಾನ್ಯ(ಮಹಿಳೆ). ವಾರ್ಡ್ ಸಂಖ್ಯೆ-22 ಅಜಾದ್ ನಗರ-03-ಸಾಮಾನ್ಯ. ವಾರ್ಡ್ ಸಂಖ್ಯೆ-23 ಆಶ್ರಯ ಕಾಲೋನಿ-ಪರಿಶಿಷ್ಟ ಪಂಗಡ ಅಭ್ಯರ್ಥಿ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top