ದಾವಣಗೆರೆ: ಪಂಚಮಸಾಲಿ ಸಮಾಜದ ದಾವಣಗೆರೆ ಜಿಲ್ಲಾ ಘಟಕ ಮತ್ತು ಜಿಲ್ಲಾ ಯುವ ಘಟಕ, ಸಮಾಜದ ಎಲ್ಲಾ ಘಟಕಗಳು ಮತ್ತು ಹರ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ನ. 25ರ ಸಂಜೆ 6 ಗಂಟೆಗೆ ರಾಜ್ಯೋತ್ಸವ ಮತ್ತು ಕಿತ್ತೂರು ರಾಣಿ ಚನ್ನಮ್ಮನ ಜಯಂತ್ಯುತ್ಸವ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಮಧ್ಯಾಹ್ನ 3 ಗಂಟೆಯಿಂದ ಸಮಾಜದ ಮಹಿಳೆ ಮತ್ತು ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ನೆನಪಿನ ಸಾಮರ್ಥ್ಯ ಪರೀಕ್ಷೆ, ಕನ್ನಡ ಶಬ್ದ ಬರಹ ಸ್ಪರ್ಧೆ, ಮ್ಯೂಜಿಕಲ್ ಚೇರ್ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಅಂದು ಮಧ್ಯಾಹ್ನ 2 ಘಂಟೆಗೆ ನಗರದ ಚೇತನಾ ಹೋಟೆಲ್ ರಸ್ತೆಯಲ್ಲಿರುವ, 1ನೇ ಮಹಡಿ, 5ನೇ ಮುಖ್ಯ ರಸ್ತೆ, 7ನೇ ಕ್ರಾಸ್, ಪಿ.ಜೆ. ಬಡಾವಣೆಯಲ್ಲಿರುವ ಸಮಾಜದ ಕಚೇರಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಕೆ.ಶಿವಕುಮಾರ್ (ಮೊಃ 9880335422),
ಕಾಶಿನಾಥ (9448533713), ಬಸವರಾಜ (9242134700) ಸಂಪರ್ಕಿಸಬಹುದು.



