ದಾವಣಗೆರೆ: ರಾಜ್ಯ ಸರ್ಕಾರದ ಕರ್ನಾಟಕ ದರ್ಶನ ಕಾರ್ಯಕ್ರಮದಡಿ ಜಿಲ್ಲೆಯ ಹರಿಹರ ತಾಲೂಕಿನ 8 ನೇ ತರಗತಿಯ 101 ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ಕಲ್ಪಿಲಾಗಿದೆ. 4 ದಿನಗಳ ಪ್ರವಾಸಕ್ಕೆ ಹೊರಟ ಬಸ್ ಗಳಿಗೆ ಬಿಇಒ ಹನುಮಂತಪ್ಪ ನಗರದ ಗುರುಭವನದ ಮುಂಭಾಗ ಚಾಲನೆ ನೀಡಿದರು.
ಚಾಲನೆ ನಂತರ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾಲೂಕಿನ ಸರ್ಕಾರಿ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿರುವ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರ ಹಾಗೂ ಒಬಿಸಿ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಆಯ್ಕೆಮಾಡಿ ನಾಲ್ಕು ದಿನಗಳ ಕರ್ನಾಟಕ ದರ್ಶನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳೊಂದಿಗೆ ನಾಲ್ಕು ಜನ ಶಿಕ್ಷಕರು ಹಾಗೂ ಪ್ರವಾಸೋಧ್ಯಮ ಇಲಾಖೆಯ 6 ಜನ ಗೈಡ್ಗಳು ತೆರಳಿದತು. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪ್ರವಾಸದ (ಬ್ಯಾಗ್, ಟೀ ಶರ್ಟ್, ಟೋಪಿ, ಪೆನ್ನು, ಪುಸ್ತಕ, ಐಡಿ ಕಾರ್ಡ್) ಕಿಟ್ನ್ನು ನೀಡಲಾಗಿದೆ ಎಂದರು.
ಹರಿಹರದಿಂದ ತುಮಕೂರು, ಬೆಂಗಳೂರು ವಸತಿ, ಶಿವನಸಮುದ್ರ, ತಲಕಾಡು, ಕೆ.ಆರ್.ಎಸ್. ಬೃಂದಾವನ ಗಾರ್ಡನ್, ಮೈಸೂರು ವಸತಿ, ಮೈಸೂರು, ಶ್ರವಣಬೆಳಗೊಳ ವಸತಿ ಮತ್ತು ಶ್ರವಣಬೆಳಗೊಳದಿಂದ ಹರಿಹರ ವಾಪಸ್ಸಾಗಲಿದ್ದಾರೆ.ಪ್ರವಾಸದ ಸ್ಥಳಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಇತಿಹಾಸ, ವಿಶೇಷತೆ ಮತ್ತು ಮಹತ್ವವನ್ನು ತಿಳಿಯಬೇಕು ಎಂದರು.
ಈ ಸಮಯದಲ್ಲಿ ಪ್ರವಾಸೋದ್ಯಮ ಇಲಾಖೆಯ ಮಹೇಶ್ವರಪ್ಪ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಹನುಮಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಪ್ಪ, ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ್, ಕಾರ್ಯದರ್ಶಿ ದನ್ಯಕುಮಾರ್, ಜಿಲ್ಲಾ ಸಹ ಕಾರ್ಯದರ್ಶಿ ಲಿಂಗರಾಜ್, ಕರ್ನಾಟಕ ದರ್ಶನ ನೋಡಲ್ ಅಧಿಕಾರಿ ಮಂಜುನಾಥ, ಕೆ.ಪಿ.ಎಸ್ ಬನ್ನಿಕೋಡು ಉಪಪ್ರಾಂಶುಪಾಲ ಕೊಟ್ರೇಶ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಹಾಗೂ ಇತರರು ಉಪಸ್ಥಿತರಿದ್ದರು.