ಕನಕದಾಸರ ಎತ್ತರದ ಪ್ರತಿಮೆಗೆ 5 ಕೋಟಿ, ರಾಯಣ್ಣ ಪ್ರಾಧಿಕಾರಕ್ಕೆ 30 ಕೋಟಿ ಭರವಸೆ ಕೊಟ್ಟ ಸಿಎಂ ಯಡಿಯೂರಪ್ಪ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಭಾರತದಲ್ಲಿ ಅತಿ ಎತ್ತರದ ಕನಕದಾಸ ಪ್ರತಿಮೆ ನಿರ್ಮಾಣಕ್ಕೆ 5 ಕೋಟಿ ಬಿಡುಗಡೆ ಮತ್ತು ರಾಯಣ್ಣ ಪ್ರಾಧಿಕಾರಕ್ಕೆ ಬಾಕಿ ಇರುವ 30 ಕೋಟಿ ಹಣವನ್ನು ನೀಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದರು.

ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಕಾಗಿನೆಲೆ ಶಾಖಾ ಮಠದಲ್ಲಿ ವಿದ್ಯಾರ್ಥಿ ನಿಲಯ, ಮಹಾ ದ್ವಾರ ಉದ್ಘಾಟಿಸಿ ಮಾರನಾಡಿದರು.

FB IMG 1617531861594

ಐತಿಹಾಸಿಕ ಕ್ಷೇತ್ರ ಕಾಗಿನೆಲೆ ಧರ್ಮ ಭೂಮಿಯಾಗಿದೆ.ಆಧ್ಯಾತ್ಮಿಕ ದಾರ್ಶನಿಕ ಕವಿ ಕನಕದಾಸರು, ಸಾಹಿತ್ಯದ ಮೂಲಕ ಜೀವನ ಮೌಲ್ಯಗಳನ್ನು ತಿಳಿಸಿದವರು.ಕನಕದಾಸರ ಆದರ್ಶದ ಪರಂಪರೆಯನ್ನು ನಿರಂಜನಾನಂದ ಪುರಿ ಮುಂದುವರಿಸುತ್ತಾರೆ ಎಂದರು.

ಎರಡು ಸಾವಿರ ವಿದ್ಯಾರ್ಥಿಗಳಿಗೆ ದಾಸೋಹ ನೀಡುತ್ತಿದ್ದಾರೆ ಶ್ರೀಗಳು, ಎಲ್ಲಾ ವರ್ಗದ ಏಳಿಗೆಗೆ ಸರ್ಕಾರ ಬದ್ಧವಾಗಿದೆ.ಪೂಜ್ಯರು ಪ್ರಸ್ತಾಪ ಮಾಡಿದಂತೆ ಈಗಾಗಲೇ ಕುರುಬ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ.ಮೀಸಲಾತಿ ಜಾಸ್ತಿ ಮಾಡುವುದಕ್ಕೆ ಅಪಿಡೇವಿಟ್ ಸಲ್ಲಿಸಿದ್ದೇವೆ.ಯಾವುದೇ ಬೇಧ ಭಾವವಿಲ್ಲದೆ ನಿಮ್ಮ ಆಪೇಕ್ಷೆ ಈಡೇರಿಸುತ್ತೇವೆ ಎಂದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *