ದಾವಣಗೆರೆ: ನಗರದ ಜನತೆಗೆ ಜಲಸಿರಿ ಯೋಜನೆಯಡಿ ಕುಡಿಯುವ ನೀರು ಬೇಗ ದೊರೆಯುವಂತಾಗಲಿ ಎಂದು ಕೆ.ಯು.ಐ.ಡಿ.ಎಫ್.ಸಿ ಉಪ ಯೋಜನಾ ನಿರ್ದೇಶಕ ರವೀಂದ್ರ ಮಲ್ಲಾಪುರ ಹೇಳಿದರು.
ದಾವಣನಗೆರೆ ನಗರದಲ್ಲಿ ಅನುಷ್ಟಾನಗೊಳುತ್ತಿರುವ ಜಲಸಿರಿ ಯೋಜನೆಯ ಗುತ್ತಿಗೆದಾರರಾದ ಸುಯೇಜ್ ಪ್ರೋಜಕ್ಟ್ಸ್ ಪ್ರೈ. ಲಿಮಿಟಡ್ ಕಂಪನಿಯವರು ಆಯೋಜಿಸಿದ್ದ 50ನೇ ವರ್ಷದ ರಾಷ್ಟ್ರೀಯ ಸುರಕ್ಷತಾ ಸಪ್ತಾಹ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿರು.
ದಾವಣಗೆರೆ ನಗರದ ಜನತೆಗೆ 24/7 ನಿರಂತರ ಶುದ್ದ ಕುಡಿಯುವ ನೀರು ಸರಬರಾಜು ಮಾಡಲು ರೂಪಿಸಲಾಗಿರುವ ಜಲಸಿರಿ ಯೋಜನೆಯು ಬೇಗನೆ ಮುಕ್ತಾಯವಾಗಿ ನಗರದ ಜನತೆಗೆ ಶುದ್ಧ ಕುಡಿಯವ ನೀರು ದೊರೆಯುವಂತಾಗಬೇಕಿದೆ ಎಂದರು.
ಸುಯೇಜ್ ಕಂಪನಿಯವರು ರಾಷ್ಟ್ರೀಯ ಸುರಕ್ಷತಾ ಸಪ್ತಾಹವನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸಿದ್ದು, ಈ ಕಂಪನಿಯಡಿ ಕಾರ್ಯನಿರ್ವಹಿಸುವ ಕಾರ್ಮಿಕರು ಹಾಗೂ ಅಧಿಕಾರಿಗಳು ತಮ್ಮ ದಿನನಿತ್ಯದ ಕಾಮಗಾರಿಯ ಸಂದರ್ಭದಲ್ಲಿ ಸುರಕ್ಷತೆಯ ಅಂಶಗಳನ್ನು ಗಮನದಲ್ಲಿಟ್ಟು ಕೆಲಸ ನಿರ್ವಹಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಕೆ.ಯು.ಐ.ಡಿ.ಎಫ್.ಸಿ.ಯ ಕಾರ್ಯಪಾಲಕ ಅಭಿಯಂತರ ಮಂಜುನಾಥ ಮಾತನಾಡಿ, ಸುಯೇಜ್ ಕಂಪನಿ ಕಾಮಗಾರಿ ಸಂದರ್ಭದಲ್ಲಿ ಪಾಲಿಸುವ ಸುರಕ್ಷತಾ ಕ್ರಮಗಳು ಹಾಗೂ ಕೆಲಸದ ಬದ್ಧತೆಯನ್ನು ಶ್ಲಾಘಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ ಅಣಜಿ ಹಾಗೂ ಶ್ರೀ ರವಿ ಯವರು ಜಲಸಿರಿ ಯೋಜನೆಯ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಿಕೆ ಹಾಗೂ ಸಾರ್ವಜನಿಕರ ಸುರಕ್ಷತೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸುರಕ್ಷತಾ ಸಪ್ತಾಹದ ಅಂಗವಾಗಿ ಸುಯೇಜ್ ಕಂಪನಿಯ ಅಭಿಯಂತರರ ತಂಡಗಳಿಗಾಗಿ ಆಯೋಜಿಸಲಾಗಿದ್ದ “ಕ್ರಿಕೆಟ್ ಟೂರ್ನಿ” ಯಲ್ಲಿ ವಿಜೇತರಾದ ಪ್ರಶಾಂತ್ ತಂಡಕ್ಕೆ ಪ್ರಥಮ ಹಾಗೂ ಸೋಮಶೇಖರ್ ತಂಡಕ್ಕೆ ದ್ವೀತಿಯ ಬಹುಮಾನವನ್ನು ಅತಿಥಿಗಳು ವಿತರಿಸಿದರು. ಜೊತೆಗೆ ವರ್ಷದ ಉತ್ತಮ ಸಾಧಕರ ಪ್ರಶಸ್ತಿಗಳನ್ನು ಸುಯೇಜ್ ಆಯ್ದ ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ನೀಡಲಾಯಿತು.

ಕಾರ್ಯಕ್ರಮ ವೇದಿಕೆಯಲ್ಲಿ ಜಲಸಿರಿ ಯೋಜನೆಯ ಸಮಾಲೋಚಕರಾದ ಈಜೀಸ್ ಇಂಜಿನಿಯರಿಂಗ್ಸಂಸ್ಥೆಯ ಸಂಜಯ ಕಲಾಲ್ ಹಾಗೂ ಸುಯೇಜ್ ಕಂಪನಿಯ ಅಧಿಕಾರಿ ಸಚಿತ್, ದಾಸ್, ಪ್ರಶಾಂತ್ ಹಾಗೂ ಸತ್ಯಚಂದ್ರ, ಸುಯೇಜ್ ಕಂಪನಿಯ ಬೆಂಗಳೂರಿನ ಯೋಜನಾ ನಿರ್ದೇಶಕ ಕುಲಕರ್ಣಿರವರು ಕಾರ್ಯಕಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿ.ಕೆ.ನರಸಿಂಹಮೂರ್ತಿ ನಿರ್ವಹಿಸಿದರೆ ಶ್ರೀ ಸನೂಪ್ ಸ್ವಾಗತವನ್ನು ಕೋರಿದರು ಹಾಗೂ ಶ್ರೀ ಪ್ರಶಾಂತ್ ವಿ.ಕೆ ವಂದಿಸಿದರು. ಕಾರ್ಯಕ್ರಮದಲ್ಲಿ ಸುಯೇಜ್ ಕಂಪನಿಯ ಸಿಬ್ಬಂದಿ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.



