ಭೀಕರ ಅಪಘಾತದಲ್ಲಿ ತನ್ನ ರಕ್ಷಣೆ ಜತೆ ಇಡೀ ಫ್ಯಾಮಿಲಿ ರಕ್ಷಣೆ ಮಾಡಿ ಸಾಹಸ ಪ್ರದರ್ಶಿಸಿದ ದಾವಣಗೆರೆ‌ ಜಿಲ್ಲೆಯ ಬಾಲಕನಿಗೆ ಶೌರ್ಯ ಪ್ರಶಸ್ತಿ ಪ್ರದಾನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಭೀಕರ ಅಪಘಾತವೊಂದರಲ್ಲಿ ತನ್ನ ರಕ್ಷಣೆ ಜತೆ ತಂದೆ- ತಾಯಿ ರಕ್ಷಣೆ ಮಾಡಿದ ದಾವಣಗೆರೆ‌ ಜಿಲ್ಲೆಯ ಕೀರ್ತಿಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಭೀಕರ ಅಪಘಾತದಲ್ಲಿ ಕಾರು ಪಲ್ಪಿ ಹೊಡೆದಿತ್ತು. ಈ ವೇಳೆ ಒಂದೇ ಕುಂಟುಂಬದ ನಾಲ್ಕು ಜನ ಕಾರಿನೊಳಗೆ ಸಿಲುಕಿಕೊಂಡಿದ್ದರು. ಕಾರಿ‌ನಲ್ಲಿದ್ದ ಬಾಲಕ ಧೈರ್ಯದಿಂದ ತನ್ನ ತಂದೆ, ತಾಯಿ ಹಾಗೂ ಸಹೋದರಿಯ ಪ್ರಾಣ ಉಳಿಸಿದ್ದ. ಸಾಹಸ ಪ್ರದರ್ಶಿಸಿದ ಬಾಲಕನಿಗೆ ದೆಹಲಿಯಲ್ಲಿ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರಿನ ನಿವಾಸಿ ಮಂಜುನಾಥ್ ಮತ್ತು ಶೃತಿ ದಂಪತಿಯ 12 ವರ್ಷದ ಪುತ್ರ ಕೀರ್ತಿಗೆ ಶೌರ್ಯ ಪ್ರಶಸ್ತಿ ಲಭಿಸಿದೆ.

ಬಾಲಕ ಕೀರ್ತಿ ವಿವೇಕ್ ಸಾಹುಕಾರ್ ಜಗಳೂರಿನ ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡ್ತಿದ್ದಾನೆ. ತಂದೆ ಮಂಜುನಾಥ್ ಸಾಹುಕಾರ್ ಜಗಳೂರಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಶೃತಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

21 ಆಗಸ್ಟ್ 2022ರಂದು ಬಾಲಕ ಕೀರ್ತಿ ವಿವೇಕ್ ಸಾಹುಕಾರ್, ತನ್ನ ತಂದೆ, ತಾಯಿ, ಸಹೋದರಿ ಸೇರಿ ನಾಲ್ವರು ಕಾರಿನಲ್ಲಿ ಪಯಣಿಸುತ್ತಿದ್ದರು. ಜಗಳೂರಿನಿಂದ 25 ಕಿಲೋಮೀಟರ್ ಅಂತರದಲ್ಲಿರುವ ಅಗಸನಹಳ್ಳಿಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನಕ್ಕೆಂದು ಅವರು ತೆರಳುತ್ತಿದ್ದರು. ಈ ಮಾರ್ಗದ ಕಿರಿದಾದ ರಸ್ತೆಯೊಂದರಲ್ಲಿ ಕಾರಿನ ಚಕ್ರಕ್ಕೆ ನಾಯಿ ಮರಿ ಸಿಲುಕಿತ್ತು. ತಕ್ಷಣ ಕೀರ್ತಿಯ ತಂದೆ ನಾಯಿಯ ಜೀವ ಉಳಿಸುವ ಸಲುವಾಗಿ ಬ್ರೇಕ್ ಹಾಕಿದಾಗ ಕಾರು ಪಲ್ಟಿಯಾಗಿ ಕಂದಕಕ್ಕೆ ಬಿದ್ದಿತ್ತು.

ಕಾರಿನ ಬಾಗಿಲುಗಳು ತೆರೆಯಲಾಗದಂತೆ ಲಾಕ್ ಆಗಿದ್ದವು. ಯಾರಿಗೂ ಕಾರಿನಿಂದ ಹೊರಬರಲು ಸಾಧ್ಯವಾಗದೇ ನಾಲ್ವರ ಪ್ರಾಣಕ್ಕೆ ಕಂಠಕ ಎದುರಾಗಿತ್ತು. ಬಾಲಕ ಕೀರ್ತಿಯ ಸಮಯಪ್ರಜ್ಞೆಯಿಂದ ತಂದೆ, ತಾಯಿ, ಸಹೋದರಿ ಸೇರಿ ಮೂವರು ಪ್ರಜ್ಞೆ ತಪ್ಪಿದ್ದರು.

ತಾಯಿ ಕೈ ಮುರಿದುಕೊಂಡಿದ್ದರು. ಬೆನ್ನುಮೂಳೆಗೆ ಪೆಟ್ಟು ಬಿದ್ದು ತಂದೆಗೆ ಡ್ರೈವರ್ ಸೀಟ್‌ನಿಂದ ಏಳಲು ಸಾಧ್ಯವಾಗುತ್ತಿರಲಿಲ್ಲ. ಅವರು ತೀವ್ರ ಆಘಾತಕ್ಕೊಳಗಾಗಿದ್ದರು. ಕಾರಿನ ಬಾಗಿಲು ಲಾಕ್ ಆಗಿದ್ದರಿಂದ ಲೋಹದ ನೀರಿನ ಬಾಟಲ್ನಿಂದ ಕಾರಿನ ಮುಂಭಾಗದ ಗಾಜು ಒಡೆದು ಮೊದಲು ತಂಗಿಯನ್ನು ರಕ್ಷಿಸಿ ಕಾರಿಂದ ಹೊರ ಕರೆತಂದಿದ್ದಾನೆ. ನಂತರ ತನ್ನ ತಂದೆಯನ್ನೂ ಹೊರ ಕರೆತರುವಲ್ಲಿ ಯಶಸ್ವಿಯಾಗಿದ್ದ. ಎಚ್ಚರ ತಪ್ಪಿದ ಸ್ಥಿತಿಯಲ್ಲಿದ್ದ ತಾಯಿಯನ್ನು ತಂದೆ-ಮಗ ಇಬ್ಬರೂ ಸೇರಿ ಹೊರತರುವಲ್ಲಿ ಯಶಸ್ವಿ ಆಗಿದ್ದರು. ನಂತರ ಬಾಲಕ ಪೊಲೀಸ್ , ಅಂಬುಲೆನ್ಸ್ ಮತ್ತು ಸಂಬಂಧಿಕರಿಗೆ ಫೋನ್ ಕರೆ ಮಾಡಿ ಮಾಹಿತಿ ನೀಡಿದ್ದನು.

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *