ದಾವಣಗೆರೆ: ಸೋಲಾರ್ ಘಟಕಗಳ ಕೇಬಲ್ ವೈರ್ ಕಳ್ಳನ ಮಾಡುತ್ತಿದ್ದ ಐವರು ಆರೋಪಿಗಳನ್ನು ಜಗಳೂರು ಪೊಲೀಸರು ಬಂಧಿಸಿ ಕಳ್ಳತನವಾದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಬಂಧಿತರಿಂದ ವಶಪಡಿಸಿಕೊಂಡ ಸ್ವತ್ತಿನ ವಿವರ
ಬಂಧಿತ ಆರೋಪಿತರಿಂದ ಪ್ರಕರಣ 1ರಲ್ಲಿ ಅಂದಾಜು 45050/-ರೂ ಬೆಲೆ ಬಾಳುವ ಸುಮಾರು 53 ಕೆಜಿ ಕಾಪರ್ ತಂತಿ, ಪ್ರಕರಣ 2ರಲ್ಲಿ ಗಅಂದಾಜು 27200/-ರೂ ಬೆಲೆ ಬಾಳುವ ಸುಮಾರು 32 ಕೆಜಿ ಕಾಪರ್ ತಂತಿ, ಪ್ರಕರಣ 3ರಲ್ಲಿ 43,350/-ರೂ ಬೆಲೆ ಬಾಳುವ ಸುಮಾರು 51 ಕೆಜಿ ಕಾಪರ್ ತಂತಿಯನ್ನು ಮತ್ತು ಕೃತ್ಯಕ್ಕೆ ಬಳಸಿದ 50,000/-ತೂ ಬೆಲೆ ಬಾಳುವ ಮೋಟಾರ್ ಬೈಕ್ ಜಪ್ತಿ ಮಾಡಲಾಗಿದೆ.
ಎಲ್ಲೆಲ್ಲಿ ಕಳ್ಳತನ..?
ದಿನಾಂಕ:25.03.2025 ರಂದು ಕಮಂಡಲಗುಂದಿ ಗ್ರಾಮದ ಹತ್ತಿರ ಇರುವ ಕ್ಲೀನ್ ಮ್ಯಾಕ್ಸ್ ಸೋಲಾರ್ ವಿದ್ಯುತ್ ಘಟಕದಲ್ಲಿ, ದಿನಾಂಕ:03.04.2025 ಹುಚ್ಚವ್ವನಹಳ್ಳಿ ಗ್ರಾಮದ ಹತ್ತಿರ ಇರುವ CMES, JUPITER PVT LTD CLEANMAX SCORPLO PVT LTD ನ ಸೋಲಾರ್ ವಿದ್ಯುತ್ ತಯಾರಿಕಾ ಘಟಕದಲ್ಲಿ, ದಿನಾಂಕ:25.05.2025 ರಂದು ಕಮಂಡಲಗುಂದಿ ಗ್ರಾಮದ ಹತ್ತಿರ ಇರುವ ಕ್ಲೀನ್ ಮ್ಯಾಕ್ಸ್ ಸೋಲಾರ್ ವಿದ್ಯುತ್ ಘಟಕದಲ್ಲಿ ಕೇಬಲ್ ವೈರ್ ಕಳ್ಳತನ ಮಾಡಿದ ಆರೋಪಿಗಳನ್ನು ಜಗಳೂರು ಪೊಲೀಸ್ ಠಾಣೆಯ ಪೊಲೀಸರು ತಂಡವು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಐವರ ಬಂಧನ
ಆರೋಪಿಗಳಾದ ಎ1- ಬಾಬು ಪ್ರಸಾದ, 32 ವರ್ಷ, ಕೂಲಿ ಕೆಲಸ, ವಾಸ-ಹುಚ್ಚವ್ವನಹಳ್ಳಿ ಗ್ರಾಮ, ಜಗಳೂರು ತಾ., ಎ2- ರಂಗನಾಥ, 35 ವರ್ಷ, ವ್ಯವಸಾಯ ವೃತ್ತಿ, ವಾಸ-ಹುಚ್ಚವ್ವನಹಳ್ಳಿ ಗ್ರಾಮ, ಜಗಳೂರು ತಾ, ಎ-3 ಪುನೀತ, 32 ವರ್ಷ, ವ್ಯವಸಾಯ ವೃತ್ತಿ, ವಾಸ-ಹುಚ್ಚವ್ವನಹಳ್ಳಿ ಗ್ರಾಮ, ಜಗಳೂರು ತಾ., ಎ4 ಮಂಜುನಾಥ, 32 ವರ್ಷ, ವ್ಯವಸಾಯ ವೃತ್ತಿ, ವಾಸ-ಮಲ್ಲೇನಹಳ್ಳಿ ಗ್ರಾಮ, ದಾವಣಗೆರೆ ತಾ., ಎ-5 ವಿಜಯಕುಮಾರ, 25 ವರ್ಷ, ವ್ಯವಸಾಯ ವೃತ್ತಿ, ವಾಸ ಹುಚ್ಚವ್ವನಹಳ್ಳಿ ಗ್ರಾಮ, ಜಗಳೂರು ತಾ., ದಾವಣಗೆರೆ ಜಿಲ್ಲೆ ಇವರನ್ನು ಬಂಧಿಸಲಾಗಿದೆ.
ಮೇಲ್ಕಂಡ ಕಾರ್ಯಾಚರಣೆಯಲ್ಲಿ ಎಎಸ್ಪಿ ಮಂಜುನಾಥ ಜಿ , ಡಿವೈಎಸ್ಪಿ ಬಸವರಾಜ ಬಿ.ಎಸ್ ಮಾರ್ಗದರ್ಶನದಲ್ಲಿ ಜಗಳೂರು ಪೊಲೀಸ್ ನಿರೀಕ್ಷಕ ಬಿ.ಎಂ.ಸಿದ್ರಾಮಯ್ಯ, ಪೊಲೀಸ್ ಉಪನಿರೀಕ್ಷಕ ಹೆಚ್.ಗಾದಿಲಿಂಗ, ಶರಣಬಸಪ್ಪ ಕಾಂದೆ, ಸಿಬ್ಬಂದಿಗಳಾದ ಪಕ್ಷಣ್ಣ ಬಸವರಾಜ, ನಾಗಭೂಷಣ, ಹನುಮಂತ ಕವಾಡಿ, ನಾಗರಾಜಯ್ಯ, ಉಮಾಶಂಕರ, ನಾಗರಾಜ, ಇವರು ಭಾಗವಹಿಸಿದ್ದರು. ಈ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.