ದಾವಣಗೆರೆ: ಸೋಲಾರ್ ಘಟಕಗಳ ಕೇಬಲ್ ವೈರ್ ಕಳ್ಳತನ; ಐವರ ಬಂಧನ

ದಾವಣಗೆರೆ: ಸೋಲಾರ್ ಘಟಕಗಳ ಕೇಬಲ್ ವೈರ್ ಕಳ್ಳನ ಮಾಡುತ್ತಿದ್ದ ಐವರು ಆರೋಪಿಗಳನ್ನು ಜಗಳೂರು ಪೊಲೀಸರು ಬಂಧಿಸಿ ಕಳ್ಳತನವಾದ ಸ್ವತ್ತು ವಶಪಡಿಸಿಕೊಂಡಿದ್ದಾರೆ.

ಬಂಧಿತರಿಂದ ವಶಪಡಿಸಿಕೊಂಡ ಸ್ವತ್ತಿನ ವಿವರ

ಬಂಧಿತ ಆರೋಪಿತರಿಂದ ಪ್ರಕರಣ 1ರಲ್ಲಿ‌ ಅಂದಾಜು 45050/-ರೂ ಬೆಲೆ ಬಾಳುವ ಸುಮಾರು 53 ಕೆಜಿ ಕಾಪರ್ ತಂತಿ, ಪ್ರಕರಣ 2ರಲ್ಲಿ‌ ಗಅಂದಾಜು 27200/-ರೂ ಬೆಲೆ ಬಾಳುವ ಸುಮಾರು 32 ಕೆಜಿ ಕಾಪರ್ ತಂತಿ, ಪ್ರಕರಣ 3ರಲ್ಲಿ‌ 43,350/-ರೂ ಬೆಲೆ ಬಾಳುವ ಸುಮಾರು 51 ಕೆಜಿ ಕಾಪರ್ ತಂತಿಯನ್ನು ಮತ್ತು ಕೃತ್ಯಕ್ಕೆ ಬಳಸಿದ 50,000/-ತೂ ಬೆಲೆ ಬಾಳುವ ಮೋಟಾರ್ ಬೈಕ್ ಜಪ್ತಿ ಮಾಡಲಾಗಿದೆ.

ಎಲ್ಲೆಲ್ಲಿ ಕಳ್ಳತನ..?

ದಿನಾಂಕ:25.03.2025 ರಂದು ಕಮಂಡಲಗುಂದಿ ಗ್ರಾಮದ ಹತ್ತಿರ ಇರುವ ಕ್ಲೀನ್ ಮ್ಯಾಕ್ಸ್ ಸೋಲಾರ್ ವಿದ್ಯುತ್ ಘಟಕದಲ್ಲಿ, ದಿನಾಂಕ:03.04.2025 ಹುಚ್ಚವ್ವನಹಳ್ಳಿ ಗ್ರಾಮದ ಹತ್ತಿರ ಇರುವ CMES, JUPITER PVT LTD CLEANMAX SCORPLO PVT LTD ನ ಸೋಲಾರ್ ವಿದ್ಯುತ್ ತಯಾರಿಕಾ ಘಟಕದಲ್ಲಿ, ದಿನಾಂಕ:25.05.2025 ರಂದು ಕಮಂಡಲಗುಂದಿ ಗ್ರಾಮದ ಹತ್ತಿರ ಇರುವ ಕ್ಲೀನ್ ಮ್ಯಾಕ್ಸ್ ಸೋಲಾರ್ ವಿದ್ಯುತ್ ಘಟಕದಲ್ಲಿ ಕೇಬಲ್ ವೈರ್ ಕಳ್ಳತನ ಮಾಡಿದ ಆರೋಪಿಗಳನ್ನು ಜಗಳೂರು ಪೊಲೀಸ್ ಠಾಣೆಯ ಪೊಲೀಸರು ತಂಡವು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಐವರ ಬಂಧನ

ಆರೋಪಿಗಳಾದ ಎ1- ಬಾಬು ಪ್ರಸಾದ, 32 ವರ್ಷ, ಕೂಲಿ ಕೆಲಸ, ವಾಸ-ಹುಚ್ಚವ್ವನಹಳ್ಳಿ ಗ್ರಾಮ, ಜಗಳೂರು ತಾ., ಎ2- ರಂಗನಾಥ, 35 ವರ್ಷ, ವ್ಯವಸಾಯ ವೃತ್ತಿ, ವಾಸ-ಹುಚ್ಚವ್ವನಹಳ್ಳಿ ಗ್ರಾಮ, ಜಗಳೂರು ತಾ, ಎ-3 ಪುನೀತ, 32 ವರ್ಷ, ವ್ಯವಸಾಯ ವೃತ್ತಿ, ವಾಸ-ಹುಚ್ಚವ್ವನಹಳ್ಳಿ ಗ್ರಾಮ, ಜಗಳೂರು ತಾ., ಎ4 ಮಂಜುನಾಥ, 32 ವರ್ಷ, ವ್ಯವಸಾಯ ವೃತ್ತಿ, ವಾಸ-ಮಲ್ಲೇನಹಳ್ಳಿ ಗ್ರಾಮ, ದಾವಣಗೆರೆ ತಾ., ಎ-5 ವಿಜಯಕುಮಾರ, 25 ವರ್ಷ, ವ್ಯವಸಾಯ ವೃತ್ತಿ, ವಾಸ ಹುಚ್ಚವ್ವನಹಳ್ಳಿ ಗ್ರಾಮ, ಜಗಳೂರು ತಾ., ದಾವಣಗೆರೆ ಜಿಲ್ಲೆ ಇವರನ್ನು ಬಂಧಿಸಲಾಗಿದೆ.

ಮೇಲ್ಕಂಡ ಕಾರ್ಯಾಚರಣೆಯಲ್ಲಿ ಎಎಸ್ಪಿ ಮಂಜುನಾಥ ಜಿ , ಡಿವೈಎಸ್ಪಿ ಬಸವರಾಜ ಬಿ.ಎಸ್ ಮಾರ್ಗದರ್ಶನದಲ್ಲಿ ಜಗಳೂರು ಪೊಲೀಸ್ ನಿರೀಕ್ಷಕ ಬಿ.ಎಂ.ಸಿದ್ರಾಮಯ್ಯ, ಪೊಲೀಸ್ ಉಪನಿರೀಕ್ಷಕ ಹೆಚ್.ಗಾದಿಲಿಂಗ, ಶರಣಬಸಪ್ಪ ಕಾಂದೆ, ಸಿಬ್ಬಂದಿಗಳಾದ ಪಕ್ಷಣ್ಣ ಬಸವರಾಜ, ನಾಗಭೂಷಣ, ಹನುಮಂತ ಕವಾಡಿ, ನಾಗರಾಜಯ್ಯ, ಉಮಾಶಂಕರ, ನಾಗರಾಜ, ಇವರು ಭಾಗವಹಿಸಿದ್ದರು. ಈ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Dvgsuddi: ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Recent Posts