Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ವ್ಯಾಪಾರಿ ಮನೆ ಮೇಲೆ ಏಕಾಏಕಿ ಐಟಿ ದಾಳಿ; 2 ಕೋಟಿಗೂ ಅಧಿಕ ನಗದು, 1 ಕೆ.ಜಿ. ಚಿನ್ನ, ಹಲವು ದಾಖಲೆ ವಶ

ದಾವಣಗೆರೆ

ದಾವಣಗೆರೆ: ಅಡಿಕೆ ವ್ಯಾಪಾರಿ ಮನೆ ಮೇಲೆ ಏಕಾಏಕಿ ಐಟಿ ದಾಳಿ; 2 ಕೋಟಿಗೂ ಅಧಿಕ ನಗದು, 1 ಕೆ.ಜಿ. ಚಿನ್ನ, ಹಲವು ದಾಖಲೆ ವಶ

ದಾವಣಗೆರೆ: ಅಡಿಕೆ ವ್ಯಾಪಾರಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ( ಐಟಿ ) ದಾಳಿ ಮಾಡಿದ್ದು, ಎರಡು ದಿನ ಶೋಧದ ಬಳಿಕ ಅಡಿಕೆ ವ್ಯಾಪಾರಿ ಮನೆಯಲ್ಲಿ 2 ಕೋಟಿಗೂ ಅಧಿಕ ನಗದು, 1 ಕೆ.ಜಿ. ಚಿನ್ನ ಹಾಗೂ ಹಲವು ದಾಖಲೆ ವಶಕ್ಕೆ ಪಡೆಯಲಾಗಿದೆ.

ಈ ದಾಳಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬುಳುಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಡಿಕೆ ವ್ಯಾಪಾರಿಗಳಾದ ಮಹಮದ್ ಖಲೀಮ್ ಹಾಗೂ ಅವರ ಸಹೋದರ ಬಾಬು ಅಲಿಯಾಸ್ ಜಾಕೀರ್ ಅಹಮದ್ ಖಾನ್‌ ಅವರ ಮನೆ ಮೇಲೆ ಶುಕ್ರವಾರ ತಡ ರಾತ್ರಿ ದಾಳಿ ನಡೆದಿದ್ದು,ಶನಿವಾರ ಸಹ ಶೋಧ ಕಾರ್ಯ ಮುಂದುವರೆದಿತ್ತು. ಬೆಂಗಳೂರು ಹಾಗೂ ದಾವಣಗೆರೆಯಿಂದ 20 ಐಟಿ ಅಧಿಕಾರಿಗಳು ಬಂದಿದ್ದರು.

ಖಲೀಮ್ ಹಾಗೂ ಜಾಕೀರ್ ಅಹಮದ್ ಖಾನ್ 25ರಿಂದ 30 ವರ್ಷಗಳಿಂದ ಅಡಿಕೆ ವ್ಯಾಪಾರವನ್ನು ಮಾಡುತ್ತಿದ್ದು, ದಾವಣಗೆರೆ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ 100 ಎಕರೆಗಿಂತ ಹೆಚ್ಚು ಅಡಿಕೆ ತೋಟವನ್ನು ಹೊಂದಿದ್ದಾರೆ. ಸಹೋದರರು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಅಡಿಕೆಯನ್ನು ಖರೀದಿ ಮಾಡಿ, ದೆಹಲಿ, ಆಗ್ರಾ, ಸೂರತ್ ಸೇರಿದಂತೆ ಹಲವು ಪ್ರದೇಶಗಳಿಗೆ ಸಾಗಿಸುತ್ತಿದ್ದರು. ಐಟಿ ದಾಳಿಯಲ್ಲಿ 2 ಕೋಟಿಗೂ ಹೆಚ್ಚು ನಗದು ಹಾಗೂ 1 ಕೆ.ಜಿಗೂ ಅಧಿಕ ಚಿನ್ನ ಆಭರಣ ಹಾಗೂ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top