ದಾವಣಗೆರೆ:ಕಾಂಗ್ರೆಸ್ ಪರವಾಗಿ ನಿಂತ ಎಲ್ಲರಿಗೂ ಬೆದರಿಕೆ ಇದೆ. ಆದಾಯ ತೆರಿಗೆ ಇಲಾಖೆಯು ಕೇಂದ್ರ ಸರ್ಕಾರದ ಏಜೆಂಟ್ನಂತೆ ಕೆಲಸ ಮಾಡುತ್ತಿದೆ. ಆದಾಯ ತೆರಿಗೆ ದಾಳಿ ನಡೆಸಲಾಗುತ್ತಿದೆ.ಸುಮ್ಮಸುಮ್ಮನೇ ದಾಳಿ ನಡೆಯುತ್ತಿದೆ. ಅವರು ಏನೇ ಮಾಡಿದರೂ ನಾವು 141 ಸ್ಥಾನ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಹೊನ್ನಾಳಿಯಲ್ಲಿ ಮಾತನಾಡಿ, ಗೋವಾದಲ್ಲಿ ಶ್ರೀ ರಾಮಸೇನೆಯನ್ನು ಆರಂಭ ಮಾಡಲು ಗೋವಾ ಸರ್ಕಾರ ಬಿಡಲಿಲ್ಲ, ಬಿಜೆಪಿ ಸರ್ಕಾರ ಇದ್ದರೂ, ರಾಮಸೇನಾ ಓಪನ್ ಆಗಲು ಬಿಡಲಿಲ್ಲ. ಇವತ್ತು ಬಿಜೆಪಿಯವರು ಹನುಮಾನ್ ಚಾಲಿಸಾ ಬಗ್ಗೆ ಮಾತಾಡುತ್ತಾರೆ. ಭಜರಂಗಿಗೂ ಬಜರಂಗದಳಕ್ಕೂ ವ್ಯತ್ಯಾಸ ಇದೆ, ನಾವು ದೇಶ ದ್ರೋಹಿಗಳ ಬಗ್ಗೆ ಮಾತನಾಡುತ್ತಿದ್ದೇವೆ ಎಂದರು.
ಎಷ್ಟು ಜನ ಅಮಾಯಕರು ಕರಾವಳಿಯಲ್ಲಿ ಸತ್ತು ಹೋಗಿದ್ದಾರೆ. ಬಜರಂಗದಳ ಹೆಸರನ್ನು ಹೇಳಿಕೊಂಡು ದೇಶವನ್ನು ಲೂಟಿ ಹೊಡೆದಿದ್ದಾರೆ. ಮೋದಿಯವರು ಸಭೆಯಲ್ಲಿ ಹನುಮಾನ್ ಎಂದು ಹೇಳುತ್ತಿದ್ದಾರೆ. ಅವರು ಹನುಮಾನ್ ಬದಲಿಗೆ ಅವರ ಹೆಸರನ್ನು ನರೇಂದ್ರ ಅಂತಾ ಹೇಳಿಕೊಳ್ಳಲಿ, ನರೇಂದ್ರ ಹೆಸರು ದೇವರ ಹೆಸರಲ್ವ? ಕೋವಿಡ್ ಸಂದರ್ಭದಲ್ಲಿ ಸುರೇಶ್ ಅಂಗಡಿ ಶವವನ್ನು ತಂದು ತೋರಿಸಲಿಕ್ಕಾಗಲಿಲ್ಲ. ಕೋವಿಡ್ನಲ್ಲಿ ಚಾಮರಾಜನಗರದಲ್ಲಿ ಸತ್ತ 36 ಸಾವಿರ ಜನರಿಗೆ ದುಡ್ಡು ಕೊಡೋಕೆ ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೋದಿ ರ್ಯಾಲಿಗೆ ಅಡ್ಡಿಪಡಿಸಲು ಆಯಂಬುಲೆನ್ಸ್ ತಗೊಂಡು ಬಂದವನನ್ನು ಅರೆಸ್ಟ್ ಮಾಡಲಿ. ಪ್ರಿಯಾಂಕಾ ಗಾಂಧಿ ರೋಡ್ ಶೋಗೆ ಡಬಲ್ ರೋಡ್ ಕೊಡುತ್ತಿಲ್ಲ, ಡಬಲ್ ರೋಡ್ನಲ್ಲಿ ಒಂದು ಕಡೆ ಮೋದಿ ಅವರು ಓಡಾಡಲು ಜಾಗ ಕೊಡುತ್ತಿದ್ದಾರೆ, 10ನೇ ತಾರೀಕಿನವರೆಗೂ ಅವರ ಸರ್ಕಾರ, ಬಳಿಕ ಅವರು ರೋಡ್ ಮೇಲಾದ್ರು ಮಲಗಿಕೊಳ್ಳಲಿ ಎಂದರು.



