Connect with us

Dvgsuddi Kannada | online news portal | Kannada news online

ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ ಕೋತಿಗಳ ಕಿರಿಕ್ ..!

ದಾವಣಗೆರೆ

ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ ಕೋತಿಗಳ ಕಿರಿಕ್ ..!

ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ  ಕೋತಿಯೊಂದು ಭಾರೀ ಕಿರಿಕ್ ಉಂಟು ಮಾಡಿ ಸುದ್ದಿಯಾಗಿದೆ. ಹೊನ್ನಾಳಿ  ತಾಲೂಕು ಕಚೇರಿ ಎದುರು ಕೋತಿ ಹಾವಳಿ ಹೆಚ್ಚಾಗಿದ್ದು, ಈ ಹಾವಳಿ ರೇಣುಕಾಚಾರ್ಯ ಅವರಿಗೂ ಬಿಸಿ ಮುಟ್ಟಿಸಿತು. 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿರುವ ಈ ಕೋತಿಗಳು,  ಇಂದು ಶಾಸಕರ ಮೇಲೆ ಎರಗಲು ಮುಂದಾಗಿತ್ತು.ಅದೃಷ್ಟವಶಾತ್​ ರೇಣುಕಾಚಾರ್ಯ ಅವರು ತಪ್ಪಿಸಿಕೊಂಡಿದ್ದಾರೆ.

ಕೆಲ ತಿಂಗಳ ಹಿಂದೆ ಹೊನ್ನಾಳಿಯ ಸಂತೆಮೈದಾನದಲ್ಲಿ ನಡೆದಿದ್ದ ಟಗರು ಕಾಳಗದ ಉದ್ಘಾಟನೆ ಮಾಡಿದ್ದ ಶಾಸಕ ರೇಣುಕಾಚಾರ್ಯ ಅವರ ಮೈಮೇಲೆ ಟಗರು ತಿವಿದಿತ್ತು. ಇದಕ್ಕೂ ಮೊದಲು ಹೋರಿಯಿಂದಲೂ ಸ್ವಲ್ಪದಲ್ಲಿಯೇ ರೇಣುಕಾಚಾರ್ಯ ಅವರು ಬಚಾವಾಗಿದ್ದರು.ಇದೀಗ ಕೋತಿಯಿಂದಲೂ ತಪ್ಪಿಸಿಕೊಂಡಿದ್ದಾರೆ.

ಹೊನ್ನಾಳಿಯಲ್ಲಿ ಕೋತಿ ಕಾಟ ಹೆಚ್ಚಾಗಿದ್ದು ಜನರು ಭಯಭೀತರಾಗುವ ಸ್ಥಿತಿ ಬಂದಿದೆ. ಈಗ ಶಾಸಕರ ಮೇಲಿನ ದಾಳಿ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇದಾಗಲೇ ಅರಣ್ಯ ಅಧಿಕಾರಿಗಳು ಅವುಗಳನ್ನು ಹಿಡಿಯಲು ವಿಫಲವಾಗಿದ್ದಾರೆ. ಬಲೆ ತೆಗೆದುಕೊಂಡು ಬಂದು ಹಿಡಿದರೂ ಸಾಧ್ಯವಾಗುತ್ತಿಲ್ಲ. ಕೋತಿಗೆ ಅರವಳಿಕೆ ಮದ್ದು ನೀಡಿದರೆ ಮಾತ್ರ ಸೇರೆ ಹಿಡಿಯಲು ಸಾಧ್ಯ ಎನ್ನಲಾಗುತ್ತಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top