ದಾವಣಗೆರೆ: ಗಿರಣಿ, ಕಾರಪುಡಿ, ಶಾವಿಗೆ, ಗಾಣ, ರಾಗಿ ಕ್ಲೀನಿಂಗ್ ಯಂತ್ರ ಸೇರಿ ಕೃಷಿ ಯಂತ್ರೋಪಕರಣ‌ ಸಹಾಯಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ಕೃಷಿ ಇಲಾಖೆಯಿಂದ ಗಿರಣಿ, ಕಾರಪುಡಿ, ಶಾವಿಗೆ, ಗಾಣ, ರಾಗಿ ಕ್ಲೀನಿಂಗ್ ಯಂತ್ರ ಸೇರಿ ಕೃಷಿ ಯಂತ್ರೋಪಕರಣ‌ ಸಹಾಯಧನಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಯಂತ್ರೋಪಕರಣ ಯೋಜನೆಯಡಿ ಜಿಲ್ಲೆಯ ಹೊನ್ನಾಳಿಯ ತಾಲ್ಲೂಕು ರೈತರು ಭೂಮಿ ಸಿದ್ಧತೆ, ಬಿತ್ತನೆ, ಕೂರಿಗೆ ಮತ್ತು ಕೃಷಿಗೆ ಸಂಬಂಧಿಸಿದ ಇತರೆ ಉಪಕರಣಗಳನ್ನು ಪಡೆಯಬಹುದು. ಇದಲ್ಲದೆ, ತುಂತುರು ನೀರಾವರಿ ಘಟಕಗಳು ಹಾಗೂ ಕೃಷಿ ಸಂಸ್ಕರಣೆ ಯೋಜನೆಯಡಿ ಹಿಟ್ಟಿನ ಗಿರಣಿ, ಕಾರಪುಡಿ ಯಂತ್ರ, ಶಾವಿಗೆ ಯಂತ್ರ, ಎಣ್ಣೆ ಗಾಣ, ರಾಗಿ ಕ್ಲೀನಿಂಗ್ ಯಂತ್ರ ಮುಂತಾದ ಸಂಸ್ಕರಣಾ ಘಟಕಗಳನ್ನು ಖರೀದಿಸಲು ಅವಕಾಶವಿದೆ.

ಶೇ. 90ರಷ್ಟು ರಿಯಾಯಿತಿ

ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ರೈತರಿಗೆ ಶೇ.50 ಮತ್ತು ಎಸ್‌ಸಿ/ಎಸ್‌ಟಿ ರೈತರಿಗೆ ಶೇ.90 ಸಹಾಯಧನದೊಂದಿಗೆ ಈ ಘಟಕಗಳನ್ನು ವಿತರಿಸಲಾಗುವುದು ಎಂದು ಹೊನ್ನಾಳಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Dvgsuddi: ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Related Post
Recent Posts