ದಾವಣಗೆರೆ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಹರಿಹರದ ಹರಿಹರೇಶ್ವರ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ಜರುಗಿತು. ಭರತ ಹುಣ್ಣಿಮೆಯ ಮೇಷ ಲಗ್ನದಲ್ಲಿ ಬೆಳಿಗ್ಗೆ 11.45ಕ್ಕೆ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.ಬ್ರಹ್ಮರಥೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು.
ಹರಿಹರ ಪಟ್ಟಣದ ರಥಬೀದಿಯಲ್ಲಿ ಎರಡು ಗಂಟೆಗಳ ಕಾಲ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ತಿರಿಸಿದರು. ಏಳು ದಿನಗಳ ಕಾಲ ಹೋಮ ಹವನ, ಮಹಾರುದ್ರಾಭಿಷೇಕ ಜೊತೆಗೆ ಪೂರ್ಣಾಹುತಿ ನಡೆಯುತ್ತದೆ. ಆರನೇ ದಿನಕ್ಕೆ ರಥೋತ್ಸವ ನಡೆಯಿತು.
ಶಿವ ಮತ್ತು ವಿಷ್ಣು ಒಂದೇ ಮೂರ್ತಿಯಲ್ಲಿರುವುದು ಈ ಪುಣ್ಯಕ್ಷೇತ್ರದ ವಿಶೇಷ. ಹರಿಹರೇಶ್ವನ ಅರ್ಧ ಮುಖ ಹರಿ (ವಿಷ್ಣು) ಇನ್ನರ್ಧ ಮುಖ ಹರ (ಶಿವ) ಕಾಣಬಹುದು. ಬ್ರಹ್ಮರಥೋತ್ಸವವು ಅಪಾರ ಭಕ್ತ ಸಾಗರ ನಡುವೆ ಸಮಯಕ್ಕೆ ಸರಿಯಾಗಿ ಅದ್ಧೂರಿಯಾಗಿ ನಡೆಯಿತು.



