ದಾವಣಗೆರೆ: ಹರಿಹರ ಹೊರ ವಲಯದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳನ್ನು ಪದಚ್ಯುತಿಗೊಳಿಸಲಾಗಿದೆ. ಗುರುಪೀಠದ ಸರ್ವ ಟ್ರಸ್ಟಿಗಳ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಒಂದೆಡೆ ಮಠದ ಒಳಗೆ ಟ್ರಸ್ಟಿಗಳ ಮಹತ್ವದ ಸಭೆ ನಡೆಯುತ್ತಿದ್ದು, ಮತ್ತೊಂದೆಡೆ ಮಠದ ಹೊರಗೆ ಲೆಕ್ಕ ಕೊಡಿ ಅಭಿಯಾನ ಅಂಗವಾಗಿ ಪ್ರತಿಭಟನೆ ನಡೆಯುತ್ತಿತ್ತು. ಈ ಮೂಲಕ ಮಠ ಹೊರ-ಒಳಗೆ ಭಾರೀ ಹೈಡ್ರಾಮಕ್ಕೆ ಸಾಕ್ಷಿ ಆಗಿತ್ತು.
ದಾವಣಗೆರೆ: ಫಲಿತಾಂಶಕ್ಕೆ ಮುನ್ನವೇ ಕಾಂಗ್ರೆಸ್ಗೆ ಸೋಲೋ ಭೀತಿ; ಕುಟುಂಬ ರಾಜಕಾರಣಕ್ಕೆ ಸೋಲು ಖಚಿತ; ವಿನಯ್ಕುಮಾರ್
ಮಠದಲ್ಲಿ ಇಂದು (ಏ.13) ನಡೆದ ಸಭೆಯಲ್ಲಿ ಶ್ರೀ ಮಠದ 15 ಟ್ರಸ್ಟಿಗಳ ಪೈಕಿ 13 ಟ್ರಸ್ಟಿಗಳು ವಚನಾನಂದ ಶ್ರೀಗಳ ಪದಚ್ಯುತಿ ತೀರ್ಮಾನ ಕೈಗೊಂಡಿದ್ದಾರೆ. ತೆಗೆದು ಹಾಕಲು ಸರ್ವ ಟ್ರಸ್ಟಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳು ಪೀಠಾರೋಹಣದ ಸಂದರ್ಭದಲ್ಲಿ ತಿಳಿಸಿದಂತೆ ಬೆಂಗಳೂರಿನ ಶ್ವಾಸ ಯೋಗ ಪೀಠವನ್ನು ತ್ಯಜಿಸಬೇಕು ಎಂದು ಹಲವು ಬಾರಿ ಗಡುವು ನೀಡಲಾಗಿತ್ತು. ಈ ಬಗ್ಗೆ ಅವರು ಯಾವುದೇ ತೀರ್ಮಾನ ಕೈಗೊಳ್ಳದ ಹಿನ್ನೆಲೆ ಅವರನ್ನು ಪೀಠದಿಂದ ತೆಗೆದುಹಾಕುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಗುರುಪೀಠದ ಟ್ರಸ್ಟಿ ಬಸವರಾಜ್ ದಿಂಡೂರು ಮಾಧ್ಯಮಕ್ಕೆ ಮಾಹಿತಿ ನೀಡಿದರು.
ದಾವಣಗೆರೆ: ಸ್ಥಿರ ಬೆಲೆ ಕಾಯ್ದುಕೊಂಡ ಅಡಿಕೆ ದರ
ಮಠದ ಹೊರಗೆ ಲೆಕ್ಕಕೊಡಿ ಅಭಿಯಾನ
ಮಠದ ಒಳಗೆ ಟ್ರಸ್ಟಿಗಳ ಸಭೆ ನಡೆಯುತ್ತಿದ್ದರೆ, ಹೊರಗಡೆ ಮಠದ ಭಕ್ತರಿಂದ ಲೆಕ್ಕ ಕೊಡಿ ಅಭಿಯಾನ ನಡೆಯಿತು. ಮಠದ ಆವರಣದಲ್ಲಿ ಭಾರಿ ಹೈಡ್ರಾಮ ನಡೆಯಿತು. ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ನೇತೃತ್ವದಲ್ಲಿ ಮಠದ ಭಕ್ತರು ಲೆಕ್ಕ ಕೊಡಿ ಎಂದು ಮಠದ ಟ್ರಸ್ಟಿಗಳನ್ನು ಆಗ್ರಹಿಸಿದರು. ಮಠದ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಮಠ ನಿಮ್ಮ ಸ್ವಂತ ಮನೆ ಅಸ್ತಿಯಲ್ಲ. ರಾತ್ರೋರಾತ್ರಿ ಮಠಕ್ಕೆ ಶ್ರೀಗಳನ್ನು ತಂದು ಪೀಠಾಧಿಪತಿ ಮಾಡಿದ್ದೀರಿ. ಆಗ ಅವರು ನಿಮಗೆ ಒಳ್ಳೆಯ ಗುರುಗಳು ಆಗಿದ್ದರು. ಈಗ ಮಠದ ಭಕ್ತರು ಲೆಕ್ಕಕೊಡಿ ಅಭಿಯಾನ ಆರಂಭಿಸಿದ್ದಾಗ ಏಕಾಏಕಿ ಶ್ರೀಗಳನ್ನು ತೆಗೆದು ಹಾಕಲು ತೀರ್ಮಾನ ಕೈಗೊಂಡಿದ್ದೀರಿ. ನಿಮಗೆ ಬೇಕಾದ ಶ್ರೀಗಳನ್ನು ಕರೆದುಕೊಂಡು ಬರುವುದು, ಬೇಡವದಾಗ ತೆಗೆದು ಹಾಕಲು ಇದು ನಿಮ್ಮ ಮನೆಯ ಆಸ್ತಿಯಲ್ಲ. ಇದು ಸಮಾಜದ ಪ್ರತಿಯೊಬ್ಬರ ಭಕ್ತ ಹಣ. 2008 ರಿಂದ ಇಲ್ಲಿವರೆಗೆ ಟ್ರಸ್ಟಿ ಉಮಾಪತಿ ಲೆಕ್ಕಕೊಡಬೇಕು. ನಾವು ಯಾವುದೇ ಕಾರಣಕ್ಕೆ ಲೆಕ್ಕಕೊಡುವವರೆಗೂ ಈ ಹೋರಾಟ ಬಿಡುವುದಿಲ್ಲ. ಈಗಿರುವ ಭ್ರಷ್ಟ ಟ್ರಸ್ಟಿಗಳನ್ನು ತೆಗೆದು ಹಾಕಿ ಎಂದು ಪ್ರತಿಭಟನ ನಿರತ ಮಾಜಿ ಶಾಸಕ ಎಚ್. ಎಸ್. ಶಿವಶಂಕರ್ ಆಗ್ರಹಿಸಿದರು.



