ದಾವಣಗೆರೆ: ಗುತ್ತಿಗೆದಾರರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಹರಿಹರ ನಗರಸಭೆಯ 5ನೇ ವಾರ್ಡ್ನ ಸದಸ್ಯೆ ನಾಗರತ್ನಮ್ಮ ಎನ್. ಕೆ. ಸದಸ್ಯತ್ವವನ್ನು ರದ್ದುಗೊಳಿಸಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ.
2022-23ನೇ ಸಾಲಿನ ಅನುಮೋದಿತಕ್ರಿಯಾ ಯೋಜನೆಯಡಿಯಲ್ಲಿ ಕೈಗೊಂಡಿದ್ದ ಕಾಮಗಾರಿಗೆ ಗುತ್ತಿಗೆದಾರ ಮೊಹಮ್ಮದ್ ಮಜಹರ್ ಅವರಿಗೆ ನಾಗರತ್ನಮ್ಮ ಎನ್.ಕೆ. ಅನುದಾನ ಬಿಡುಗಡೆ ಮಾಡಲು 25,000 ರೂ. ಲಂಚ ಪಡೆದಿದ್ದರು.3, 20,000ಕ್ಕೆ ಬೇಡಿಕೆ ಇಟ್ಟಿದ್ದರು’ ಎಂಬ ಆರೋಪ ಇವರ ಮೇಲಿತ್ತು.
ಲೋಕಾಯುಕ್ತರು ಕೈಗೊಂಡ ತನಿಖೆಯಲ್ಲಿ ನಾಗರತ್ನಮ್ಮ ಅವರು ಭ್ರಷ್ಟಾಚಾರ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆರೋಪಪಟ್ಟಿಯನ್ನು ಸಲ್ಲಿಸಿದ್ದು, ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಕಲಂ 41 (1) ಅಡಿಯಲ್ಲಿ ಸದಸ್ಯತ್ವ
ರದ್ದು ಮಾಡಲಾಗಿದೆ.



