Connect with us

Dvgsuddi Kannada | online news portal | Kannada news online

ದಾವಣಗೆರೆ; ಭದ್ರಾ ನಾಲೆ ನೀರು ನಿಲ್ಲುವ ಆತಂಕ ಬೇಡ; ರೈತರು ಯಾವ ವದಂತಿಗಳಿಗೆ ಕಿವಿ ಕೊಡಬೇಡಿ: ಶಾಸಕ ಬಿ.ಪಿ. ಹರೀಶ್

IMG 20230818 113635

ದಾವಣಗೆರೆ

ದಾವಣಗೆರೆ; ಭದ್ರಾ ನಾಲೆ ನೀರು ನಿಲ್ಲುವ ಆತಂಕ ಬೇಡ; ರೈತರು ಯಾವ ವದಂತಿಗಳಿಗೆ ಕಿವಿ ಕೊಡಬೇಡಿ: ಶಾಸಕ ಬಿ.ಪಿ. ಹರೀಶ್

ದಾವಣಗೆರೆ; ಮಳೆ ಕೊರತೆ ಹಿನ್ನೆಲೆ ಭದ್ರಾ ಡ್ಯಾಂ ನಿಂದ ನಾಲೆಗೆ ಹರಿಸುವ ನೀರು ನಿಲ್ಲಿಸುತ್ತಾರೆಂಬ ಆತಂಕ ಬೇಡ.‌ರೈತರು ಯಾವ ವದಂತಿಗಳಿಗೆ ಕಿವಿ ಕೊಡದೆ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಶಾಸಕ ಬಿ.ಪಿ. ಹರೀಶ್ ತಿಳಿಸಿದ್ದಾರೆ.

ಭದ್ರಾ ಅಚ್ಚುಕಟ್ಟು ಪ್ರದೇಶದ ಮುಂಗಾರು ಹಂಗಾಮಿನ ಬೆಳೆಗಳಿಗೆ ಜಲ ಸಂಪನ್ಮೂಲ ಇಲಾಖೆಯ ಸೂಚನೆ ಮೇರೆಗೆ 100 ದಿನ ನೀರು ಹರಿಸುವ ಬಗ್ಗೆ ಭದ್ರಾ ಅಧೀಕ್ಷಕ ಅಧಿಸೂಚನೆಯನ್ನು ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ. ಆ ಪ್ರಕಾರ ಈಗಾಗಲೇ ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ
ಆಗಿದೆ. ರೈತರು ಯಾವ ವದಂತಿಗಳಿಗೆ ಕಿವಿ ಕೊಡದೆ ಕೃಷಿ ಚಟುವಟಿಕೆಗಳಲ್ಲಿ‌‌ ತೊಡಗಿಕೊಳ್ಳುಬೇಕು ಎಂದರು.

ನಾವು ರೈತರ ಪರವಾಗಿದ್ದು, ನೀರು ನಿಲ್ಲಿಸುತ್ತಾರೆಂಬ ಬಗ್ಗೆ ಯಾರಿಗೂ ಆತಂಕ ಬೇಡ. ಇನ್ನೂ ಮಳೆಗಾಲ ಇರುವುದರಿಂದ ಮಳೆದೇವ ಕೃಪೆಯಿಂದ ಜಲಾಶಯ 4-5 ದಿನಗಳಲ್ಲಿ ತುಂಬಲಿದೆ. ಈ ಬಗ್ಗೆ ನಮಗೆ
ಇನ್ನೂ ವಿಶ್ವಾಸ ಇದೆ ಎಂದರು. ಇನ್ನೂ ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ನಾಲೆ ನೀರು ನಿಲ್ಲಿಸದಂತೆ ಮನವಿ ಮಾಡಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top