Connect with us

Dvgsuddi Kannada | online news portal | Kannada news online

ದಾವಣಗೆರೆ; ಗೃಹ‌ಜ್ಯೋತಿ ಉದ್ಘಾಟನಾ ಸಮಾರಂಭದಲ್ಲಿ ಭಾರೀ ಗದ್ದಲ; ಶಾಸಕ ಹರೀಶ್ ಮಾತಿಗೆ ಆಕ್ಷೇಪ- ಮತ್ಯಾಕೆ ನನ್ನ ಕರೆಯಬೇಕೆಂದ ಶಾಸಕ..!

IMG 20230806 203059

ದಾವಣಗೆರೆ

ದಾವಣಗೆರೆ; ಗೃಹ‌ಜ್ಯೋತಿ ಉದ್ಘಾಟನಾ ಸಮಾರಂಭದಲ್ಲಿ ಭಾರೀ ಗದ್ದಲ; ಶಾಸಕ ಹರೀಶ್ ಮಾತಿಗೆ ಆಕ್ಷೇಪ- ಮತ್ಯಾಕೆ ನನ್ನ ಕರೆಯಬೇಕೆಂದ ಶಾಸಕ..!

ದಾವಣಗೆರೆ: ಗೃಹ‌ಜ್ಯೋತಿ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಮಾತಿಗೆ ಸಭೀಕರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ವಿಚಲಿತರಾಗದ ಶಾಸಕರು, ಇದು ಸರ್ಕಾರಿ ಕಾರ್ಯಕ್ರಮ. ವಿರೋಧ ಪಕ್ಷದವರು ಮಾತನಾಡಬಾರದು ಅಂದ್ರೆ, ಮತ್ಯಾಕೆ ನನ್ನ ಕರೆಯಬೇಕಿತ್ತು ಎಂದು ಕೇಳಿದರು.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನಡೆದ ರಾಜ್ಯ ಸರ್ಕಾರದ ಗೃಹಜ್ಯೋತಿ ಉದ್ಘಾಟನಾ ಸಮಾರಂಭದಲ್ಲಿ ಕೆಲ‌ಕಾಲ ಭಾರೀ ಗೊಂದಲ, ಗದ್ದಲಕ್ಕೆ ಸಾಕ್ಷಿ ಆಯ್ತು. ಹರಿಹರದ ಬಿಜೆಪಿ ಶಾಸಕ ಬಿ.ಪಿ.‌ ಹರೀಶ್ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಭೀಕರು ಕಾಂಗ್ರೆಸ್ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡಿ ಎಂದು ಒತ್ತಾಯಿಸಿದರು. ನಾನು ವಿರೋಧ ಪಕ್ಷದ ಸದಸ್ಯನಾಗಿ ಕೆಲ ಸಮಸ್ಯೆಗಳ ಬಗ್ಗೆ ಹೇಳುವುದು ನನ್ನ ಕರ್ತವ್ಯ, ಸರ್ಕಾರದ ಎಲ್ಲ ಯೋಜನೆಗಳು ಯಶಸ್ವಿಯಾಗಲಿ ಮತ್ತು ಶುಭವಾಗಲಿ ಎಂದು ಬಯಸುತ್ತೇನೆ. ಆದರೆ, ಅನ್ನ ಭಾಗ್ಯಕ್ಕೆ ಕೇಂದ್ರ ಸರ್ಕಾರವನ್ನು, ಮೋದಿಯವರನ್ನು ಏನಾದರೂ ಕೇಳಿ ಹತ್ತು ಕೆಜಿ ಅಕ್ಕಿ ಘೋಷಣೆ ಮಾಡಿದೀರಾ…?ಎಂದು ಪ್ರಶ್ನಿಸಿದಾಗ ಭಾರೀ ಗದ್ದಲ ಉಂಟಾಯಿತು.

ಯೋಜನೆಯ ಜಾರಿ ಜೊತೆಗೆ ಸಾರ್ವಜನಿಕ ಸಮಸ್ಯೆಗಳ ನಿಗಾ ವಹಿಸಬೇಕು ಎಂದು ಹೇಳುವುದು ನನ್ನ ಕರ್ತವ್ಯ ಎಂದು ಸಮಜಾಯಿಷಿ ನೀಡಿದರು.ಆದರೆ, ಸಭಾಂಗಣದಲ್ಲಿದ್ದವರು ಕೇಳಲಿಲ್ಲ. ನೀವು ಒಬ್ಬೊಬ್ಬರೇ ನಿಂತು ಮಾತನಾಡಿದರೆ ನಾನು ಜಾಗ ಬಿಟ್ಟು ಕದಲುವುದೇ ಇಲ್ಲ. ಇದು ಸರ್ಕಾರಿ ಕಾರ್ಯಕ್ರಮ ಎಂಬ ಎಚ್ಚರ ಇರಲಿ. ಹಾಗಿದ್ದರೆ ನನ್ನನ್ನು ಕರೆಯಲೇ ಬಾರದಿತ್ತು ಎಂದರು. ಭಾರೀ ಗೊಂದಲ, ಗದ್ದಲ ಏರ್ಪಟ್ಟಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಗದ್ದಲ ಮಾಡದಂತೆ ಮನವಿ ಮಾಡಿದರುಗದ್ದಲ ನಿಲ್ಲಲಿಲ್ಲ. ಇದರಿಂದ ಬೇಸತ್ತ ಹರೀಶ್ ಭಾಷಣ ಅರ್ಧಕ್ಕೆ ನಿಲ್ಲಿಸಿದರು. ಕೊನೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಮಾತನಾಡುವಂತೆ ಕೋರಿದರು. ಹರೀಶ್ ಮಾತು ಮುಂದಯವರೆಸಿದರು. ಎಲ್ಲ ಗ್ಯಾರಂಟಿ ಯೋಜನೆ ಯಶಸ್ವಿಯಾಗಲಿ, ಶುಭವಾಗಲಿ ಎಂದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top