ದಾವಣಗೆರೆ: ಜಿಲ್ಲೆಯ ಸಣ್ಣ ಉದ್ಯಮೆದಾರರು ರ್ಯಾಂಪ್ ಯೋಜನೆಯಡಿಯಲ್ಲಿ ಆರ್ಥಿಕ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ: ಡಿಸಿಎಂಗೆ ಕಪ್ಪುಬಟ್ಟೆ ಪ್ರದರ್ಶನ ; ಬಂಜಾರ ಸಮುದಾಯದ ಯುವಕರ ವಿರುದ್ಧ ಪ್ರಕರಣ ದಾಖಲು
ಜಿಲ್ಲೆಯ ಸಣ್ಣ ಉದ್ಯಮಿದಾರರು ತಮ್ಮ ಉತ್ಪನ್ನಗಳ ಶ್ರೇಷ್ಠತೆ, ಗುಣಮಟ್ಟ, ಇತರೆ ಪ್ರಮಾಣ ಪತ್ರ ಪಡೆಯಲು ಮಾಡಿರುವ ವೆಚ್ಚದ ಮೇಲೆ ರೂ 50,000 ವರೆಗೆ ಮರು ಪಾವತಿ ಪಡೆಯಲು ಹಾಗೂ ತಮ್ಮ ಉತ್ಪನ್ನ ಗಳ ಪ್ಯಾಕೇಜಿಂಗ್ ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿ ಪಡಿಸಲು ಮಾಡಿರುವ ವೆಚ್ಚದ ಮೇಲೆ ರೂ 50,000 ವರೆಗೆ ಮರುಪಾವತಿ ಪಡೆಯಲು ರ್ಯಾಂಪ್ ಯೋಜನೆಯ ಬ್ರಾಂಡ್ ಕರ್ನಾಟಕ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯ ಉದ್ಯಮಿಗಳು ಈ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಬಹುದು. ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕ ಕೇಂದ್ರ ಕರೂರು ಕೈಗಾರಿಕ ಪ್ರದೇಶ ಕಚೇರಿಯನ್ನು ದಾವಣಗೆರೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ವೀರೇಂದ್ರ 9538731451, ಕೊಟ್ರೇಶ್ 9901030264, ಚೇತನ್ 8884141820 ಇವರಿಗೆ ಸಂಪರ್ಕಿಸಬಹುದೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.



