Connect with us

Dvgsuddi Kannada | online news portal | Kannada news online

ದಾವಣಗೆರೆ: ಕಿಡಿಗೇಡಿಗಳು ಇಟ್ಟ ಬೆಂಕಿ; ನೋಡ ನೋಡುತ್ತಲೇ‌ ಸುಟ್ಟು ಭಸ್ಮವಾದ ಹುಲ್ಲಿನ‌ ಬಣವೆ…!!

IMG 20240220 135521

ದಾವಣಗೆರೆ

ದಾವಣಗೆರೆ: ಕಿಡಿಗೇಡಿಗಳು ಇಟ್ಟ ಬೆಂಕಿ; ನೋಡ ನೋಡುತ್ತಲೇ‌ ಸುಟ್ಟು ಭಸ್ಮವಾದ ಹುಲ್ಲಿನ‌ ಬಣವೆ…!!

ದಾವಣಗೆರೆ: ಕಿಡಿಗೇಡಿಗಳು ಇಟ್ಟ ಬೆಂಕಿಗೆ ನೋಡ ನೋಡುತ್ತಲೇ ಬಣವೆ ಧಗಧಗನೆ ಹೊತ್ತಿ ಉರಿದಿವೆ. ಬೆಂಕಿಗೆ 150 ಪೆಂಡೆ ರಾಗಿ ಮತ್ತು ಭತ್ತದ ಹುಲ್ಲಿನ ಬಣವೆ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಅಣಬೇರು ಗ್ರಾಮದಲ್ಲಿ ನಡೆದಿದೆ.

ಅಣಬೇರು ಗ್ರಾಮದ ಕುಂಬಾರ ಮಂಜಣ್ಣ ಎಂಬುವವರಿಗೆ ಸೇರಿದ ‌ಹುಲ್ಲಿನ ಬಣವೆ ಸುಟ್ಟು ಹೋಗಿವೆ. ಈ ಬಾರಿ ಬರ ಬಿದ್ದಿದ್ದರಿಂದ ಮಂಜಣ್ಣ ಕಷ್ಟಪಟ್ಟು ಮುಂಗಾರು ಹಂಗಾಮಿನಲ್ಲಿಯೇ ಬೇಸಿಗೆ ಮತ್ತು ಮಳೆಗಾಲಕ್ಕೆ ಆಗುವಷ್ಟು 50 ಪೆಂಡೆ ರಾಗಿ ಹುಲ್ಲು, 100 ಪೆಂಡೆ ಭತ್ತದ ಹುಲ್ಲು ಸಂಗ್ರಹಿಸಿದ್ದರು. ಬೇಸಿಗೆ ತಾಪಮಾನ ಹೆಚ್ಚಾಗಿದ್ದರಿಂದ ನೋಡ ನೋಡುತ್ತಿದ್ದಂತೆ ಬೆಂಕಿ ಜ್ವಾಲೆ ಎಲ್ಲಾ ಬಣವೆಗೆ ಆವರಿಸಿದೆ.

ಯಾರೋ ಕಿಡಿಗೇಡಿಗಳು ಇಟ್ಟ ಬೆಂಕಿಗೆ , ಕಷ್ಟಪಟ್ಟು ಜಾನುವಾರುಗಳಿಗೆ ಸಂಗ್ರಹಿಸಿದ ಮೇವು‌ ಸುಟ್ಟು ಹೋಗಿದೆ ಎಂದು ಮಂಜಣ್ಣ ಅಳಲು ತೋಡಿಕೊಂಡಿದ್ದಾರೆ. ಮೇವು ಕಳೆದುಕೊಂಡ ರೈತನಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top