ದಾವಣಗೆರೆ: ಸಾಲಬಾಧೆಯಿಂದ ಬೇಸತ್ತು ರೈತ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಡರನಾಯ್ಕನಹಳ್ಳಿ ಗ್ರಾಮದ ಕೆ.ಎಚ್. ಕಾಶಿನಾಥ್ (38) ಆತ್ಮಹ*ತ್ಯೆ ಮಾಡಿಕೊಂಡ ರೈತ. ಕಡರನಾಯ್ಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2 ಲಕ್ಷ ಸಾಲ ಪಡೆದಿದ್ದರು. ಎರಡು ಎಕರೆ ಜಮೀನಿನಲ್ಲಿ ಇಳುವರಿ ಕಡಿಮೆ ಮತ್ತು ಈ ಬಾರಿ ಭತ್ತದ ದರ ಕಡಿಮೆ ಇರುವುದರಿಂದ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬ ಸದಸ್ಯರು ಮಲೇಬೆನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.