ದಾವಣಗೆರೆ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಜೂ.05 ರಂದು ವಿಶ್ವ ಪರಸರ ದಿನಾಚರಣೆಯ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಚಿತ್ರ ಬರೆಯಲಾ?, ಕಲೆ ಇಲ್ಲದಿದ್ದರೆ ಇಳೆಗೆ ಕಳೆ ಇಲ್ಲ ! ಭೂಮಿಯನ್ನು ರಕ್ಷಿ, ನಿಮ್ಮ ಐಡಿಯಾಗಳನ್ನು ಚಿತ್ರಿಸಿ! ಎಂಬ ವಾಕ್ಯದೊಂದಿಗೆ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ 5ನೇ ತರಗತಿಯವರೆಗಿನ ಮಕ್ಕಳಿಗೆ ನನ್ನ ಸುಂದರ ಜಗತ್ತು ಎಂಬ ವಿಷಯದ ಚಿತ್ರಕಲೆ, 6 ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಮರ, ಕಾಡು ಮತ್ತು ಮಳೆ ಎಂಬ ವಿಷಯದ ಬಗ್ಗೆ, 11ನೇ ತರಗತಿಯಿಂದ ಪದವಿವರೆಗಿನ ಮಕ್ಕಳಿಗೆ ಸಮುದ್ರವನ್ನು ಕಾಪಾಡಿ ಎಂಬ ವಿಷಯದ ಬಗ್ಗೆ ಚಿತ್ರಿಸಬೇಕು.
ಬಿಡಿಸಿದ ಚಿತ್ರಕಲೆಯನ್ನು ಇಮೇಲ್ ಮುಖಾಂತರ ms@kspcb.gov.in and seo-awrn@kspcb.gov.in ಅಥವಾ ಅಂಚೆಯಲ್ಲಿ The member secretary, KSPCB, Parisara Bhavana, Church Street Bangaluru-560001.ಗೆ ಮೇ.30 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ www.kspcb.karnataka.gov.in ನ್ನು ಸಂಪರ್ಕಿಸಬಹುದೆಂದು ಕರಾಮಾನಿಮಂ ಪರಿಸರ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



