ದಾವಣಗೆರೆ: ನ.13ರಿಂದ ಮಹಾನಗರ ಪಾಲಿಕೆಯಲ್ಲಿ ಇ-ಆಸ್ತಿ ವಿಶೇಷ ಆದೋಲನ; ಯಾವ ದಾಖಲೆ ಅಗತ್ಯ..? ಎಲ್ಲೆಲ್ಲಿ ನಡೆಯಲಿದೆ; ಇಲ್ಲಿದೆ ಮಾಹಿತಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಸರ್ಕಾರವು ಸಾರ್ವಜನಿಕರ ಆಸ್ತಿಗಳ ಸುರಕ್ಷತೆಗೆ ಇ-ಆಸ್ತಿ ಕಡ್ಡಾಯ ಮಾಡಿದೆ. ಈ ಮೂಲಕ ಜನರು ಕಡ್ಡಾಯವಾಗಿ ಆಸ್ತಿ, ಮನೆ, ನಿವೇಶನಗಳ ಇ-ಆಸ್ತಿ ಡಿಜಿಟಲ್ ಪ್ರಮಾಣ ಪತ್ರ ಪಡೆದುಕೊಳ್ಳಬಹಹುದಾಗಿದೆ. ಇದರಿಂದ ನಿಮ್ಮ ಆಸ್ತಿಗಳನ್ನು ಯಾರೋ ನಕಲಿ ದಾಖಲೆ ಸೃಷ್ಠಿಸಿ ಮಾರಾಟ ಮಾಡುವುದು ಸೇರಿ ಇತರೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಹೀಗಾಗಿ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಇ-ಆಸ್ತಿ ಮಾಡಿಸುವುದು ಕಡ್ಡಾಯವಾಗಿದೆ.

ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ‌ ಏಕಗವಾಕ್ಷಿಯಡಿ ಇ-ಆಸ್ತಿ ವಿಶೇಷ ಆಂದೋಲನ ಹಮ್ಮಿಕೊಂಡಿದೆ. ನವೆಂಬರ್ 13 ರಿಂದ ಡಿಸೆಂಬರ್ 31ರವರೆಗೆ ಪಾಲಿಕೆಯ 3 ವಲಯ ಕಚೇರಿಗಳಲ್ಲಿ ಆಂದೋಲನ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬಹುದು. ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಿ, ಇ-ಆಸ್ತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸರತವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಯುಕ್ತೆ
ರೇಣುಕಾ ತಿಳಿಸಿದ್ದಾರೆ.

  • ಇ-ಆಸ್ತಿ ಪಡೆಯಲು ಬೇಕಾದ ದಾಖಲೆಗಳು:
  • ಸ್ವತ್ತಿನ ಮಾಲೀಕತ್ವದ ಕ್ರಯ, ದಾನ ಪತ್ರ, ಪಾಲುವಿಭಾಗ ಹಾಗೂ ಇತರೆ
    ನೋಂದಣಿ ದಾಖಲೆಗಳು
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಸ್ವತ್ತಿನ ಛಾಯಾಚಿತ್ರ
  • ಮಾಲೀಕರ ಗುರುತಿನ ದಾಖಲೆ ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್
  • ಸಕ್ಷಮ ಪ್ರಾಧಿಕಾರದಿಂದ ಪಡೆದ ಬಡಾವಣೆ ಅನುಮೋದನೆ ಪತ್ರ ಹಾಗೂ ನಕ್ಷೆ
  • ಕಟ್ಟಡ ಪರವಾನಿಗೆ ಪಡೆದ ದಾಖಲೆ
  • 2001-02ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿಸಿದ ದಾಖಲೆಗಳು
  • ನೀರಿನ ಶುಲ್ಕ, ಒಳಚರಂಡಿ, ಘನತ್ಯಾಜ್ಯ ಸೇವಾ ಶುಲ್ಕಪಾವತಿಸಿದ ದಾಖಲೆಗಳು

ಎಲ್ಲೆಲ್ಲಿ ನಡೆಯಲಿದೆ ಆಂದೋಲನ:

  1. ವಲಯ ಕಛೇರಿ-1, ರಾಜೀವ್ ಗಾಂಧಿ ಬಡಾವಣೆ ದಾವಣಗೆರೆಯ ವಲಯದ ಆಯುಕ್ತೆ ನಾಗರತ್ನಮ್ಮ ಮೊ.ಸಂ:7349048992, ಸಂಪರ್ಕಿಸಬೇಕಾದ ಅಧಿಕಾರಿ: ಕಚೇರಿ ವ್ಯವಸ್ಥಾಪಕರಾದ ಗೋವಿಂದ‌ನಾಯ್ಕ ಮೊ.ಸಂ:9611105139
  2. ವಲಯ ಕಚೇರಿ-2, ಟಿವಿ ಸ್ಟೇಷನ್ ಮುಂಭಾಗ, ಲೋಕಿಕೆರೆ ರಸ್ತೆ ದಾವಣಗೆರೆಯ ವಲಯ ಆಯುಕ್ತರಾದ ಇಸ್ಮಾಯಿಲ್ ಮೊ.ಸಂ:9844367555, ಸಂಪರ್ಕಿಸಬೇಕಾದ‌ ಅಧಿಕಾರಿ: ಕಮಿಟಿ ಸೆಕ್ರೆಟರಿ ಸರಳಾ ಮೊ.ಸಂ: 9901124232
  3. ವಲಯ ಕಚೇರಿ-3, ಆಶ್ರಯ ಆಸ್ಪತ್ರೆ ಪಕ್ಕ ಎಂ.ಸಿ.ಸಿ ಎ. ಬ್ಲಾಕ್ ದಾವಣಗೆರೆ ವಲಯ ಆಯುಕ್ತರಾದ ಈರಮ್ಮಮೊ.ಸಂ: 9901768584, ಸಂಪರ್ಕಿಸಬೇಕಾದ ಕಚೇರಿ ವ್ಯವಸ್ಥಾಪಕರ : ತ್ರಿನೇತ್ರ ಮೊ.ಸಂ: 8971454920

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *