ದಾವಣಗೆರೆ: ಕಷ್ಠ-ದುಃಖದಲ್ಲಿ ಜೊತೆಯಾಗಿ ನಿಂತು ಸುದೀರ್ಘ ದಾಂಪತ್ಯ ಜೀವನ ನಡೆಸಿದ ದಂಪತಿ, ಸಾವಿನನಲ್ಲೂ ಒಂದಾಗಿ ಜೀವನ ಪಯಣ ಮುಗಿಸಿದ್ದಾರೆ. ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಸ್ತೂರಿ ರಂಗಪ್ಪ (65) ಜಯಮ್ಮ (61) ಮೃತ ದಂಪತಿ. ನಿನ್ನೆ (ನ.25) ಕಸ್ತೂರಿ ರಂಗಪ್ಪ ಪಡಿತರ ಅಕ್ಕಿ ತರಲು ಹೋಗಿದ್ದರು. ಈ ಸಮಯದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣ ಚನ್ನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರನಗಪ್ಪ ಮೃತಪಟ್ಟರು. ಅವರ ಸಾವಿನ ಸುದ್ದಿಯನ್ನ ಪತ್ನಿ ಜಯಮ್ಮಗೆ ಕರೆ ಮಾಡಿ ತಿಳಿಸಿದ್ದಾರೆ. ಪತಿಯ ಸಾವಿನ ಸುದ್ದಿ ಪೋನ್ ನಲ್ಲಿ ಕೇಳುತ್ತಿದ್ದಂತೆ ಜಯಮ್ಮ ಕೂಡ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಾವಿನಲ್ಲಿ ಒಂದಾದ ದಂಪತಿಗೆ ದೇವರಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆದಿದೆ.