ದಾವಣಗೆರೆ: ನಟ ದರ್ಶನ್ ಗೆ ಚಿಕಿತ್ಸೆಗೆ ಜಾಮೀನು ಮಂಜೂರು ಆಗಿರುವುದರಿಂದ ನಾವು ಕಾನೂನು ವ್ಯವಸ್ಥೆ ಬಗ್ಗೆ ಏನೂ ಹೇಳಲು ಆಗುವುದಿಲ್ಲ ಎಂದು ಕೊಲೆಯಾದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಹರಿಹರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಶೀನಾಥಯ್ಯ, ಕಾನೂನು ವ್ಯವಸ್ಥೆಯಲ್ಲಿ ಅವರಿಗೆ ಜಾಮೀನು ಆಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎನ್ನುವುದು ನಮ್ಮ ಧ್ಯೇಯ. ಕಾನೂನು ವ್ಯವಸ್ಥೆ ಬಗ್ಗೆ ನಮಗೆ ನಂಬಿಕೆ ಇದೆ .ದರ್ಶನ್ ಅವರ ಚಿಕಿತ್ಸೆ ಬಗ್ಗೆ ನಾವೇನು ಹೇಳೋಕೆ ಹೋಗುವುದಿಲ್ಲ. ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದರು.



