ದಾವಣಗೆರೆ: ನಗರದ ಬಾಷಾನಗದಲ್ಲಿ ಅಕ್ರಮವಾಗಿ ಮಂಡಕ್ಕಿಭಟ್ಟಿ ಹಾಗೂ ಅವಲಕ್ಕಿ ಮಿಲ್ ಗಳು ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿವೆ. ಹೀಗಾಗಿ ಅಕ್ರಮವಾಗಿರು ಭಟ್ಟಿಗಳನ್ನು ತೆರವುಗೊಳಿಸಬೇಕೆಂದು ಅಜಾದ್ ನಗರ ನಿವಾಸಿ ದಸ್ತಗೀರ್ ಎಸ್ ಅಸಾದುಲ್ಲಾ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಷಾನಗರ ರುದ್ರಭೂಮಿ ಪಕ್ಕ, 3 ನೇ ಕ್ರಾಸ್ ಹಾಗೂ 7 ನೇ ಕ್ರಾಸ್ ವರೆಗೆ ಇರುವ ವಸತಿ ಪ್ರದೇಶದ ಮಧ್ಯಭಾಗದಲ್ಲಿ ಅಕ್ರಮವಾಗಿ ಮಂಡಕ್ಕಿ ಭಟ್ಟಿ ಮತ್ತು ಅವಲಕ್ಕಿ ಮಿಲ್ ಗಳನ್ನು ನಿರ್ಮಿಸಿ ಇಲ್ಲಿನ ನಾಗರಿಕರಿಗೆ ತೀವ್ರ ತೊಂದರೆ ನೀಡಲಾಗುತ್ತಿದೆ.
ಶೇ. 90 ರಷ್ಟು ಜನರು ಹಲವಾರು ರೋಗಗಳಿಂದ ಬಳಲುತ್ತಿದ್ದಾರೆ. ಮಂಡಕ್ಕಿ ಭಟ್ಟಿ ಮತ್ತು ಅವಲಕ್ಕಿ ಮಿಲ್ ಧೂಳು, ಹೊಗೆಯಿಂದ ರೋಗಗಳು ಉಲ್ಬಣಿಸುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹಿರಿಯ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿಯ ಲಗತ್ತಿನೊಂದಿಗೆ ಅರ್ಜಿ ಸಲ್ಲಿಸಲಾಗುವುದು ಎಂದರು.