Connect with us

Dvgsuddi Kannada | online news portal | Kannada news online

ದಾವಣಗೆರೆ: ಜೆ.ಹೆಚ್. ಪಟೇಲ್ ರಸ್ತೆಯಲ್ಲಿ ಏಕಮುಖ ವಾಹನ ನಿಲುಗಡೆ ಡಿಸಿ ಆದೇಶ

ದಾವಣಗೆರೆ

ದಾವಣಗೆರೆ: ಜೆ.ಹೆಚ್. ಪಟೇಲ್ ರಸ್ತೆಯಲ್ಲಿ ಏಕಮುಖ ವಾಹನ ನಿಲುಗಡೆ ಡಿಸಿ ಆದೇಶ

ದಾವಣಗೆರೆ: ದಾವಣಗೆರೆ ನಗರದ ಮಹಾನಗರಪಾಲಿಕೆ ವ್ಯಾಪ್ತಿಯ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಜೆ.ಹೆಚ್ ಪಟೇಲ್ ರಸ್ತೆಯ ಜನಸಂದಣಿ ಹಾಗೂ ವಾಹನ ದಟ್ಟಣೆಯಿಂದ ರಸ್ತೆ ಕಿರಿದಾಗಿದ್ದು ಎರಡೂ ಕಡೆ ವಾಹನ ನಿಲುಗಡೆಯಿಂದ ರಸ್ತೆಯ ಸುಗಮ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಏಕಮುಕ ವಾಹನ ನಿಲುಗಡೆ ರಸ್ತೆಯನ್ನಾಗಿ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.

ಜೆ.ಹೆಚ್ ಪಟೇಲ್ ರಸ್ತೆಯ ಎರಡೂ ಬದಿ ವಾಹನಗಳ ನಿಲುಗಡೆಯ ರಸ್ತೆಯಾಗಿರುತ್ತದೆ.ಈ ರಸ್ತೆಯ ಇಂದಿನ ಜನಸಂದಣಿ ಹಾಗೂ ವಾಹನ ದಟ್ಟಣೆಗೆ ಬಹುತೇಕ ರಸ್ತೆ ಕಿರಿದಾಗಿರುತ್ತದೆ. ಈ ರಸ್ತೆಯಲ್ಲಿ ಪ್ರತಿಷ್ಠಿತ ಜವಳಿ ವಾಣಿಜ್ಯ ಮಳಿಗೆಗಳು, ಪ್ರಮುಖ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಇತರೆ ಶಾಲಾ-ಕಾಲೇಜು ಇತ್ಯಾದಿ ಇರುವುದರಿಂದ ಈ ಎರಡೂ ಕಡೆ ವಾಹನ ನಿಲುಗಡೆ ಮಾಡುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರೊಂದಿಗೆ ಪಾದಚಾರಿಗಳು ರಸ್ತೆ ಮಧ್ಯೆ ಓಡಾಡುವುದರಿಂದ ಹಾಗೂ ರಸ್ತೆ ದಾಟುವುದರಿಂದ ಸಂಚಾರ ನಿರ್ವಹಣೆ ಕರ್ತವ್ಯ ಮಾಡುವುದು ದುಸ್ತರವಾಗಿರುತ್ತದೆ.

ಈ ರಸ್ತೆಯು ಮೋದಿ ವೃತ್ತದ ಪ್ರಾರಂಭದಿಂದ ತರಳಬಾಳು ಶಾಲೆಯವರೆಗೆ ಇದ್ದು ಮೋದಿ ವೃತ್ತದಿಂದ ಹೋಗುವ ಮಾರ್ಗದ ‘ಎಡಭಾಗದ ಕಡೆಗೆ ಏಕಮುಖ ವಾಹನ ನಿಲುಗಡೆ ಹಾಗೂ ಬಲ ಭಾಗದ ಕಡೆ ವಾಹನ ನಿಲುಗಡೆ ನಿಷೇಧವನ್ನು ಮಾಡುವುದರಿಂದ ಜೆ.ಹೆಚ್ ಪಟೇಲ್ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಿರುತ್ತದೆ. ಈ ವಾಹನ ನಿಲುಗಡೆ ವ್ಯವಸ್ಥೆಯು ಜಿ.ಪಿ.ಎಸ್ ಜಾಗತಿಕ ಸ್ಥಾನೀಕರಣ ವ್ಯವಸ್ಥೆಯ ವಾಹನ ನಿಲುಗಡೆ(ಜಿಪಿಎಸ್-ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ ಇನ್ ವೆಹಿಕಲ್ ಪಾರ್ಕಿಂಗ್) ಈ ವ್ಯವಸ್ಥೆಯಿಂದ ಮಾಡಲಾಗುವುದು.

ಅದೇ ರೀತಿ ಈ ಪ್ರಮುಖ ರಸ್ತೆಗೆ ಹೊಂದಿಕೊಂಡಂತೆ ಬರುವ ಎಲ್ಲಾ ಕೂಡು ರಸ್ತೆಗಳಲ್ಲಿ ವಾಹನಗಳ ನಿಲುಗಡೆ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಪಾದಚಾರಿಗಳ ಹಾಗೂ ವಾಹನ ಸವಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಉದ್ದೇಶದಿಂದ ಮತ್ತು ನಾಗರೀಕರ ಹಿತದೃಷ್ಠಿಯಿಂದ ‘ಎಡಭಾಗದ ಕಡೆಗೆ ಏಕಮುಖ ವಾಹನ ನಿಲುಗಡೆ ಹಾಗೂ ಬಲ ಭಾಗದ ಕಡೆ ವಾಹನ ನಿಲುಗಡೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top