Connect with us

Dvgsuddi Kannada | online news portal | Kannada news online

ದಾವಣಗೆರೆ: ಸ್ವಾಗತ ಕಮಾನು ಕುಸಿತ; ಕಾರ್ಮಿಕರು ಅಪಾಯದಿಂದ ಪಾರು

harihara 1

ಹರಿಹರ

ದಾವಣಗೆರೆ: ಸ್ವಾಗತ ಕಮಾನು ಕುಸಿತ; ಕಾರ್ಮಿಕರು ಅಪಾಯದಿಂದ ಪಾರು

ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ದೀಟೂರು ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿದ್ದ ಸ್ವಾಗತ ಕಮಾನು ಕುಸಿದು ಬಿದ್ದ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬ ಕಾರ್ಮಿಕನಿಗೆ ಗಾಯವಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ.

30 ಅಡಿಯ ಈ ರಸ್ತೆಯ ಎರಡು ಕಡೆ ಕಾಂಕ್ರೀಟ್ ಪಿಲ್ಲರ್ ನಿರ್ಮಿಸಲಾಗಿತ್ತು. ಎರಡು ಪಿಲ್ಲರ್‌ಗಳ ಮಧ್ಯೆ ಆರ್‌ಸಿಸಿ ಹಾಕುವಾಗ ಈ ದುರ್ಘಟನೆ ನಡೆದಿದೆ. ದೀಟೂರು ಗ್ರಾಮಸ್ಥರಿಂದ ಗ್ರಾಮದ ಪ್ರವೇಶ ಸ್ಥಳಕ್ಕೆ ಸ್ವಾಗತ ಕಮಾನು ನಿರ್ಮಿಸಲು ಯೋಜನೆ ರೂಪಿಸಿದ್ದರು.

15 ಕಾರ್ಮಿಕರಿಂದ ಆರ್‌ಸಿಸಿ ಹಾಕುವ ಕಾರ್ಯ ನಡೆಯುತ್ತಿತ್ತು.ಈ ವೇಳೆ ಆರ್‌ಸಿಸಿಗೆ ಆಧಾರವಾಗಿಟ್ಟಿದ್ದ ಕಟ್ಟಿಗೆಗಳು ಉರುಳಿ ಬಿದ್ದಿದ್ದು, ಅದರ ಜೊತೆಗೆ ಕಬ್ಬಿಣದ ಸರಳಿನ ಹಂದರ ಹಾಗೂ ಆರ್‌ಸಿಸಿಯು ಕುಸಿದು ಬಿದ್ದಿದೆ. ಒಬ್ಬ ಕಾರ್ಮಿಕ ಕೆಳಕ್ಕೆ ಸಿಲುಕಿದ್ದನು, ಅಲ್ಲೇ ಇದ್ದ ಕಾರ್ಮಿಕರು ರಕ್ಷಣೆ ಮಾಡಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಹರಿಹರ

ದಾವಣಗೆರೆ

Advertisement
Advertisement Enter ad code here

Title

To Top