ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಬಳಿಯ ಶೃಂಗಾರ್ಬಾಗ್ ಮೀಸಲು ಅರಣ್ಯದಲ್ಲಿ ಒತ್ತುವರಿಯಾಗಿದ್ದ 54 ಎಕರೆ ಅರಣ್ಯ ಭೂಮಿಯನ್ಬು ಅರಣ್ಯ ಅಧಿಕಾರಿಗಳು ತೆರವುಗೊಳಿಸಿದರು.
ವಲಯ ಅರಣ್ಯ ಸಂರಕ್ಷಣಾಧಿಕಾರಿ ವಿ.ಜಗದೀಶ್ ನೇತೃತ್ವದಲ್ಲಿ ಶೃಂಗಾರ್ಬಾಗ್ ಹಾಗೂ ಬುಳ್ಳನಾಯಕನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ 54 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಒತ್ತುವರಿ ಮಾಡುತ್ತಿದ್ದ 17 ಜನರಿಗೆ ನೋಟಿಸ್ ನೀಡಿದ್ದು, ಒತ್ತುವರಿದಾರರು ಎಸಿಎಫ್ ನ್ಯಾಯಾಲಯಕ್ಕೆ ದಾಖಲೆಗಳನ್ನು ಹಾಜರುಪಡಿಸಲು ಸಾಧ್ಯವಾಗಿಲಲ್ಲ. ಈ ಬಗ್ಗೆ ಸುಮೋಟೋ ಕೇಸ್ ದಾಖಲಿಸಿ, ಒತ್ತುವರಿ ತೆರವಿಗೆ ಆದೇಶಿಸಲಾಗಿತ್ತು.
ಶುಕ್ರವಾರ 52 ಎಕರೆ ಒತ್ತುವರಿ ತೆರವಾಗಿದೆ. 2 ಎಕರೆಯಲ್ಲಿ 4 ಕಚ್ಚಾ ಮನೆಗಳಿವೆ. ನಿವಾಸಿಗಳಿಗೆ ತೆರವಿಗೆ ಸಮಯ ನೀಡಲಾಗಿದೆ. ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭಾ, 15 ಸಿಬ್ಬಂದಿ ಇದ್ದರು.