ದಾವಣಗೆರೆ: ಏನು ಗೊತ್ತಿಲ್ಲದ ಜನಸಾಮಾನ್ಯರು ಸೈಬರ್ ವಂಚನೆಗೆ ಒಳಗಾಗುವುದು ಸಾಮಾನ್ಯ. ಆದರೆ, ಇಲ್ಲಿ ನಿವೃತ್ತಿ ಬ್ಯಾಂಕ್ ಮ್ಯಾನೇಜರ್ ಒಬ್ಬರು ಅಪರಿಚಿತರಿಗೆ ಆಧಾರ್, ಪ್ಯಾನ್ ಕಾರ್ಡ್, ಎಟಿಎಂ ಪಿನ್ಕೋಡ್ ಹಾಗೂ ಒಟಿಪಿ ನೀಡಿ ಬರೋಬ್ಬರಿ 4.40 ಲಕ್ಷ ಕಳೆದುಕೊಂಡಿದ್ದಾರೆ.
ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಮಾಡಬೇಕೆಂದು ನಿವೃತ್ತ ಬ್ಯಾಂಕ್ ಮ್ಯಾನೇಜರ್ಗೆ 4.40 ಲಕ್ಷ ವಂಚಿಸಲಾಗಿದೆ. ತರಳುಬಾಳು ಬಡಾವಣೆಯ ಲಿಂಗರಾಜು ಎಂ.ಕೆ. ವಂಚನೆಗೆ ಒಳಗಾದವರು. ಆಗಸ್ಟ್ 27ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಕೆವೈಸಿ ಅಪ್ಡೇಟ್ ಮಾಡಬೇಕು ಆಧಾರ್, ಪ್ಯಾನ್ ಕಾರ್ಡ್, ಎಟಿಎಂ ಪಿನ್ಕೋಡ್ ಹಾಗೂ ಒಟಿಪಿ ಪಡೆದಿದ್ದಾನೆ. ನಂತರ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ಕಟ್ ಆಗಿದೆ. ಈ ಬಗ್ಗೆ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



