ದಾವಣಗೆರೆ: ನಿಮಗೆ ಕಾರು ಬಹುಮಾನವಾಗಿ ಬಂದಿದೆ ಎಂದು ಮನೆ ವಿಳಾಸಕ್ಕೆ ಬಂದ ಲೆಟರ್ ನಂಬಿ ನಿವೃತ್ತ ಶಿಕ್ಷಕರೊಬ್ಬರಿಗೆ 73 ಸಾವಿರ ವಂಚನೆಯಾಗಿದೆ ಎಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನಾಳಿ ತಾಲ್ಲೂಕಿನ ಹೊಸಹಳ್ಳಿಯ ನಿವೃತ್ತ ಶಿಕ್ಷಕ ಡಿ.ಆರ್. ಸಿದ್ಧಪ್ಪ ವಂಚನೆಗೆ ಒಳಗಾದವರಾಗಿದ್ದಾರೆ. ಹರ್ಬಲ್ ಗ್ರೂಪ್ ಆಫ್ ಇಂಡಿಯಾ ಕಂಪನಿಯಿಂದ ಒಂದು ಕೂಪನ್ ಕಾರ್ಡ್ ಸಿದ್ಧಪ್ಪ ಅವರ ಮನೆ ವಿಳಾಸಕ್ಕೆ ಬಂದಿದೆ. ನಿಮಗೆ ಕಾರು ಬಹುಮಾನವಾಗಿ ಬಂದಿದ್ದು, ನೀವು ಕಾರು ಬೇಡವೆಂದಲ್ಲಿ 14.4 ಲಕ್ಷ ಕ್ಯಾಶ್ ನೀಡಲಾಗುವುದು. ಯಾವುದಕ್ಕೂ ಕರೆ ಮಾಡಿ ಎಂದು ಮೊಬೈಲ್ ನಂಬರ್ ನೀಡಲಾಗಿತ್ತು. ಇದನ್ನು ನಂಬಿದ ಸಿದ್ಧಪ್ಪ, ಕಾಲ್ ಮಾಡಿದ್ಧಾರೆ. ಆಗ ಕಾರು ಬೇಕು ಎಂದರೆ ಮೊದಲು ತೆರಿಗೆ ಕಟ್ಟಬೇಕು. ಹೀಗಾಗಿ ಖಾತೆಗೆ ಹಣ ತುಂಬಿ ಎಂದು ವಿವಿಧ ಸಲ ಒಟ್ಟು 73 ಸಾವಿರ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.



