Connect with us

Dvgsuddi Kannada | online news portal | Kannada news online

ದಾವಣಗೆರೆ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ 5 ಟ್ರ್ಯಾಕ್ಟರ್ ಸಹಿತ ಮರಳು ವಶಕ್ಕೆ ಪಡೆದ ಪೊಲೀಸರು

ಕ್ರೈಂ ಸುದ್ದಿ

ದಾವಣಗೆರೆ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ 5 ಟ್ರ್ಯಾಕ್ಟರ್ ಸಹಿತ ಮರಳು ವಶಕ್ಕೆ ಪಡೆದ ಪೊಲೀಸರು

ದಾವಣಗೆರೆ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ 5 ಟ್ರ್ಯಾಕ್ಟರ್ ಸಹಿತ ಮರಳನ್ನು ಚನ್ನಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇ‌ಗಂಗೂರು ಗ್ರಾಮದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಿದ ಚನ್ನಗಿರಿ ಪೊಲೀಸರು, 5 ಟ್ರ್ಯಕ್ಟರ್ ಸಹಿತ ಅಕ್ರಮ‌ ಮರಳು ವಶಕ್ಕೆ ಪಡೆದಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮಧು ಪಿ.ಬಿ ನೇತೃತ್ವದಲ್ಲಿ‌ ಪಿಎಸ್ ಐ ನಾಗರಾಜ್, ಸಿಬ್ಬಂದಿಗಳಾದ ರೇವಣ್ಣ, ಸತೀಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

ವಶಪಡಿಸಿಕೊಂಡ ಮರಳನ್ನು ದಂಡ ವಿಧಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಈ ಪ್ರಕರಣ ಬೇಧಿಸಿದ ಚನ್ನಗಿರಿ ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ರಿಷ್ಯಂತ್ ಶ್ಲಾಘಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top