ದಾವಣಗೆರೆ: ನಗರದ ಬಾಡಾ ಕ್ರಾಸ್ ಹತ್ತಿರದ ಪದ್ಮಶ್ರೀ ಚಿಂದೋಡಿ ಲೀಲಾ ರಂಗಲೋಕದ ಹಿಂಭಾಗದ ಸರ್ವೀಸ್ ರಸ್ತೆಯ ಪಕ್ಕದ ಮಣ್ಣಿನ ರಸ್ತೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಅಂತರ್ ರಾಜ್ಯ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ 2.10ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಅಂತರ್ ರಾಜ್ಯ ಆರೋಪಿಗಳಾದ ಛತ್ತಿಸ್ ಘಡದ 1) ಅಂತರಾಮ್ ತಿರ್ಕಿ (21) , ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗೋವಾದಲ್ಲಿ ವಾಸವಿರುವ 2) ಮಧುರಾಜ್ ನಾಯ್ಕ್ (40) ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಗೋವಾದ ಅನಿಲ್ ಜೇಕಬ್ ಈತನ ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ವಶಕ್ಕೆ ಪಡೆದು ಆರೋಪಿಗಳಿದ್ದ ಅಂದಾಜು 2.10,000- ರೂ ಮೌಲ್ಯದ 8 ಕೆ.ಜಿ 600 ಗ್ರಾಂ ಗಾಂಜಾ,1 ಮೊಬೈಲ್ ಪೋನ್ ಹಾಗೂ900 ರೂ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಈ ಬಗ್ಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಡಿವೈಎಸ್ ಪಿ ಬಿ.ಎಸ್.ಬಸವರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಸಿ.ಇ.ಎನ್ ಪೊಲೀಸರ ಕಾರ್ಯಚರಣೆಯನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ ರವರು ಪ್ರಶಂಸಿರುತ್ತಾರೆ.



