Connect with us

Dvgsuddi Kannada | online news portal | Kannada news online

ದಾವಣಗೆರೆ: ಚಿನ್ನದಗಟ್ಟಿ‌ ಕೊಡುವುದಾಗಿ 2 ಲಕ್ಷ ವಂಚನೆ; ಮೂವರು ಆರೋಪಿಗಳ ಬಂಧನ

crime sym

ಕ್ರೈಂ ಸುದ್ದಿ

ದಾವಣಗೆರೆ: ಚಿನ್ನದಗಟ್ಟಿ‌ ಕೊಡುವುದಾಗಿ 2 ಲಕ್ಷ ವಂಚನೆ; ಮೂವರು ಆರೋಪಿಗಳ ಬಂಧನ

ದಾವಣಗೆರೆ: ಚಿನ್ನದ  ಗಟ್ಟಿ ಕೊಡುವುದಾಗಿ ಕರೆಸಿಕೊಂಡು 2 ಲಕ್ಷ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1.60 ಲಕ್ಷ ನಗದು ಹಾಗೂ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಸಂತೇಬೆನ್ನೂರು ಸಮೀಪದ ಚಿಕ್ಕಬ್ಬಿಗೆರೆ ಬಳಿ ಬೆಂಗಳೂರಿನ ಸಂಕದಕಟ್ಟೆಯ ರಾಗಿ ಮಿಲ್ ಮಾಲೀಕ ಸುರೇಶ್ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದರು. ಸುರೇಶ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಾಲ್ ಮಾಡಿ ನಮ್ಮ ಮನೆಯಲ್ಲಿ ಚಿನ್ನದ  ಗಟ್ಟಿ ಸಿಕ್ಕಿದೆ. ಇದನ್ನು ಮಾರಾಟ ಮಾಡಬೇಕಿದೆ. ನಿಮಗೆ ಕಡಿಮೆ ಬೆಲೆಗೆ ಕೊಡುತ್ತೇನೆ ಹೇಳಿದನು.

70 ಮಿಲಿ ಅಸಲಿ ಬಂಗಾರವನ್ನು ಸ್ಯಾಂಪಲ್ ಆಗಿ ಸುರೇಶ್ ಗೆ ಅಪರಿಚಿತ ವ್ಯಕ್ತಿ ಕೊಟ್ಟಿದ್ದ, ಇದನ್ನು ನಂಬಿದ ಸುರೇಶ್ 2 ಲಕ್ಷದೊಂದಿಗೆ ಬೆಂಗಳೂರಿನಿಂದ ಸಂತೇಬೆನ್ನೂರು ಸಮೀಪರ ಚಿಕ್ಕಬ್ಬಿಗೆರೆ ಬಳಿ ಬಂದಾಗ ಅಪರಿಚಿತ ಇಬ್ಬರು ವ್ಯಕ್ತಿಗಳು ಬಂದು ಒಂದುವರೆ ಕೆ.ಜಿ ನಕಲಿ ಬಂಗಾರ ಕೊಟ್ಟಿದ್ದಾರೆ. ಕೊಟ್ಟಿರುವ ಬಂಗಾರ ನಕಲಿಯೋ, ಅಸಲಿಯೋ ಎಂಬುದನ್ನು ಪರೀಕ್ಷೆ ಮಾಡುವಷ್ಟರಲ್ಲಿ ಸುರೇಶ್  ಅವರ ಮೇಲೆ 7 ರಿಂದ 8 ಮಂದಿ ದಾಳಿ ಮಾಡಿ ಮೊಬೈಲ್, 2 ಲಕ್ಷ ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಸುರೇಶ್ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top