ದಾವಣಗೆರೆ: ಕ್ರಿಪ್ಟೋ ಕರೆನ್ಸಿಯಲ್ಲಿ (cryptocurrency) ಹಣ ಹೂಡಿಕೆ ಮಾಡಿದ್ರೆ ಅಧಿಕ ಲಾಭ ಪಡೆಯಬಹುದು ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದ ನಾಲ್ವರ ವಿರುದ್ಧ. ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ (ಸಿಇಎನ್ ಠಾಣೆ) ಎಫ್ಐಆರ್ ದಾಖಲಾಗಿದೆ.
ದಾವಣಗೆರೆ: ಆನ್ ಲೈನ್ ಟ್ರೇಡಿಂಗ್ ನಲ್ಲಿ ಅಧಿಕ ಲಾಭ ಆಮಿಷ; ವ್ಯಕ್ತಿಯೊಬ್ಬರಿಗೆ 37 ಲಕ್ಷ ವಂಚನೆ
ರಾಜೇಶ್ ಮಲೇಶಿಯಾ, ಅಶ್ರದುನ್ನೀಸಾ, ಶಾಹಿದ್ ಹುಸೇನ್ ಹಾಗೂ ನದೀಮ್ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ದಾವಣಗೆರೆ ಪೊಲೀಸರು ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.
ದಾವಣಗೆರೆ: ಜಮೀನು ಹದ್ದುಬಸ್ತಿಗೆ 50 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ
ಕ್ರಿಪ್ಟೋ ಕರೆನ್ಸಿ ವಂಚನೆ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದ ದೂರು ಆಧರಿಸಿ ತನಿಖೆ ನಡೆಸಿದಾಗ ವಂಚನೆಯ ಜಾಲ ಜಿಲ್ಲೆ (ದಾವಣಗೆರೆ) ಆಕ್ಟಿವ್ ಆಗಿರು ಬಗ್ಗೆ ಖಚಿತವಾಗಿದೆ.
ಈ ಬಗ್ಗೆ ಟೆಲಿಗ್ರಾಂನಲ್ಲಿ ಗ್ರೂಪ್ ರಚಿಸಿಕೊಂಡು ವಂಚಕರು ನಿತ್ಯ ನಿಯಮಿತವಾಗಿ ಹಣ ಪಡೆದು ವಂಚಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ..



