ದಾವಣಗೆರೆ: ನಕಲಿ ಬಂಗಾರದ ವಂಚಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ 7,50,000 ರೂ.. ಮೊತ್ತದ ನಗದು ವಶಕ್ಕೆ ಪಡೆಯಲಾಗಿದೆ.
ಮಾ. 30ರಂದು ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ; ಕಾರಣ ಏನು..?
ದಾವಣಗೆರೆ ಜಿಲ್ಲೆಯ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರಿನ ರಾಮು.ಎಸ್ (40) ಎಂಬುವವರು ದಿನಾಂಕ: 20/02/2026ರಂದು ಬೆಳಗ್ಗೆ ಸಮಯದಲ್ಲಿ ಬಾಡ ಗ್ರಾಮದ ಹತ್ತಿ ನಿಧಿ ಬಂಗಾರ ಸಿಕ್ಕಿದೆ ಅಂತಾ ಹೇಳಿ 2 ಕೆ.ಜಿ ತೂಕದ ನಕಲಿ ಬಂಗಾರದ ನಾಣ್ಯವನ್ನು ಕೊಟ್ಟು ಮೊಸಮಾಡಿದ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ದಾವಣಗೆರೆ ಉಪಚುನಾವಣೆ; ಕರ್ತವ್ಯ ಲೋಪ ಎಸಗಿದ ಅಧಿಕಾರಿ ಅಮಾನತು
ಈ ಪ್ರಕರಣದ ಆರೋಪಿ ಪತ್ತೆಗಾಗಿ ಡಿವೈಎಸ್ಪಿ ಬಸವರಾಜ್. ಬಿ.ಎಸ್ ಮಾರ್ಗದರ್ಶನದಲ್ಲಿ ಮತ್ತು ಮಾಯಕೊಂಡ ವೃತ್ತ ಕಚೇರಿಯ ಸಿ.ಪಿ.ಐ ರಾಘವೇಂದ್ರ ಸಾರಥ್ಯದಲ್ಲಿ ಮಾಯಕೊಂಡ ಪೊಲೀಸ್ ಠಾಣೆಯ ಪಿಎಸ್ಐ ಶಲ ಅಜಯ್.ಎಸ್.ಬಿ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು.
1ನೇ ತರಗತಿ ದಾಖಲಾತಿ; 6 ವರ್ಷ ಕಡ್ಡಾಯ ನಿಯಮದಲ್ಲಿ ವಿನಾಯಿತಿ; ಶಿಕ್ಷಣ ಸಚಿವ
ಈ ತಂಡ ಪತ್ತೆ ಕಾರ್ಯ ಕೈಗೊಂಡು ಪ್ರಕರಣದ ಆರೋಪಿ 1) ಮಹಮದ್ ಅಲಿ ಅವಟಿ @ ಮಹಮದ್ ರಫೀಕ್ ( 36), ವಾಸ: ಮುದ್ದೆಬಿಹಾಳ್ ತಾಲ್ಲೋಕ್, ಬಿಜಾಪುರ ಜಿಲ್ಲೆ ಈತನನ್ನು ಬಂಧನ ಮಾಡಲಾಗಿದೆ. ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7,50,000/- ರೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ನಾಪತ್ತೆಯಾಗಿದ್ದು, ಪತ್ತೆಕಾರ್ಯ ಮುಂದುವರೆದಿದೆ.
ಈ ನಕಲಿ ಬಂಗಾರ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಮಾಯಕೊಂಡ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೇಮ್ಲನಾಯ್ಕ ಎಎಸ್ಐ, ಅಣ್ಣಯ್ಯ, ರಾಮಕೃಷ್ಣ, ಲೋಕೇಶ್, ರಾಜು ಲಮಾಣಿ, ಪರಶುರಾಮ್, ಸಂತೋಷ್ ಕುಮಾರ್, ದಾದಪೀರ್ ಹಾಗೂ ಚಾಲಕ ದಾದಪೀರ್ ಇವರುಗಳನ್ನು ಪೊಲೀಸ್ ಅಧೀಕ್ಷಕ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಪ್ರಶಂಶಿಸಿದ್ದಾರೆ.



