ದಾವಣಗೆರೆ: ಸರಗಳ್ಳತನ ಮಾಡುತ್ತಿದ್ದ 5 ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ ಸುಮಾರು 22.12 ಲಕ್ಷ ಮೌಲ್ಯದ ಬಂಗಾರದ ಆಭರಣ,ಕಾರು, ಬೈಕ್ ವಶಕ್ಕೆ ಪಡೆಯಲಾಗಿದೆ.
ದಿನಾಂಕ: 08/03/2026 ರಂದು ಸಾಗರ ತಾಲ್ಲೂಕು ತ್ಯಾಗರ್ತಿ ಗ್ರಾಮದ ಸತೀಶ್ ತಮ್ಮ ಕುಟುಂಬದೊಂದಿಗೆ ಹೊನ್ನಾಳಿ ಟೌನ್ ನಿಂದ ಬೈಕ್ ನಲ್ಲಿ ಹೊನ್ನಾಳಿ ಕಡೆಯಿಂದ ಶಿಕಾರಿಪುರ ರಸ್ತೆಯಲ್ಲಿ ಹೋಗುತ್ತಿರುವ ಸಂಜೆ ಸಮಯದಲ್ಲಿ ಸೊರಟೂರು ಕ್ರಾಸ್ ನಿಂದ್ ಸ್ವಲ್ಪ ಮುಂದೆ ತುಂಗಾ ಚಾನಲ್ ಹತ್ತಿರ ಹೋಗುತ್ತಿದ್ದರು. ಯಾರೋ ಇಬ್ಬರು ಒಂದು ಬೈಕ್ ನಲ್ಲಿ ಹಿಂದಿನಿಂದ ಬಂದು ಬೈಕ್ ನ ಹಿಂಬದಿಯಲ್ಲಿದ್ದ ಅವರ ಹೆಂಡತಿಯ ಕೊರಳಲ್ಲಿದ್ದ ರೂ 50,000/- ಮೌಲ್ಯದ 08 ಗ್ರಾಂ ತೂಕದ ಬಂಗಾರದ ಗುಂಡುಗಳು ಹಾಗು ಎರಡು ಬಂಗಾರದ ತಾಳಿ ಇರುವ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ಹೊನ್ನಾಳಿ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿದ್ದರು.
ರಾಜ್ಯದಲ್ಲಿ ಬಿರುಗಾಳಿ ಸಹಿತ ಅಬ್ಬರಿಸುತ್ತಿರುವ ಆಲಿಕಲ್ಲು ಮಳೆ; ಈ ಮಳೆಗೆ ಕಾರಣ ಏನು..?- ಇನ್ನೆಷ್ಟು ದಿನ ಈ ಮಳೆ..?
ಚನ್ನಗಿರಿ ಉಪವಿಭಾಗದ ಪೊಲೀಸ್ ಡಿವೈಎಸ್ಪಿ ರುದ್ರಪ್ಪ ಎಸ್ ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಪ್ರಕರಣದ ಆರೋಪಿತರ ಪತ್ತೆ ಕಾರ್ಯಕ್ಕೆ ಹೊನ್ನಾಳಿ ಪೊಲೀಸ್ ಠಾಣೆಯ ಪಿಐ ಸುನೀಲ್ ಕುಮಾರ್ ಹೆಚ್ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು.
ಈ ತಂಡ ಆರೋಪಿತರುಗಳು ಸರಗಳ್ಳತನ ಕೃತ್ಯಕ್ಕೆ ಬಳಸಿದ್ದ ಬೈಕನ್ನು ಚಿನ್ನಿಕಟ್ಟೆಯ ಹತ್ತಿರ ಬಿಟ್ಟುಹೋಗಿದ್ದನ್ನು ಪತ್ತೆಹಚ್ಚಿಕೊಂಡು, ಸದರಿ ಬೈಕಿನ ವಿವರ ಬಗ್ಗೆ ತಾಂತ್ರಿಕ ಸಹಾಯದಿಂದ ಪರಿಶೀಲಿಸಿದಾಗ ಸದರಿ ಬೈಕ್ನ ಮಾಲೀಕ ಆರೋಪಿತ ಎ1) ನಿಯಾಜ್ ಎಂ @ ನಿಯಾಜ್ ಅಹಮದ್ @ ಸಾದಿಕ್ ಮುಂಡರಗಿ( 23) ಹಾವೇರಿ ತಾ|| ಆಗಿದ್ದು, ಈತನು ಈ ಹಿಂದೆ ಬಸವಾಪಟ್ಟಣ ಪೊಲೀಸ್ ಠಾಣೆಯ ಸರಗಳ್ಳತನ ಪ್ರಕರಣದ ಆರೋಪಿತನಾಗಿದ್ದನು.
ಈ ಆರೋಪಿತನನ್ನು ರಾಣೇಬೆನ್ನೂರಿನಲ್ಲಿ ಪತ್ತೆಮಾಡಿ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಆರೋಪಿತನು ಕ್ರಿಕೆಟ್ ಬೆಟ್ಟಿಂಗ್, ಆನ್ಲೈನ್ ಗೇಮಿಂಗ್ ಗಳನ್ನು ಆಟಗಳನ್ನು ಆಡುವ ಚಟಕ್ಕೆ ಅಂಟಿಕೊಂಡು 15-20 ಲಕ್ಷ ಸಾಲ ಮಾಡಿಕೊಂಡಿದ್ದನು. ಸಾಲ ತೀರಿಸಲು ಸಾಧ್ಯವಾಗದೇ ಸಾಲಗಾರರ ಕಾಟ ಜಾಸ್ತಿಯಾಗಿದ್ದು, ಹಾಗೂ ತನ್ನ ಅಕ್ಕಳ ಮದುವೆಗೆ ಹಣ ಹೊಂದಿಸುವ ಸಲುವಾಗಿ ಈತನು ಸರಗಳ್ಳತನಕ್ಕೆ ಇಳಿದಿದ್ದನು.
ಈತನು ತನ್ನ ಸ್ನೇಹಿತರಾದಎ2) ಮುಸ್ತಾಕ್ (20)ಹಾವೇರಿ ತಾ|| & ಜಿ|| ಎ3) ಕಾನೂನು ಸಂಘರ್ಷಕ್ಕೋಳಗಾದ ಬಾಲಕ, ಎ4) ಸುಹೀಲ್ @ ಸುಹೀಲ್ ಬಾಷಾ (19) ಹಾವೇರಿ ತಾ & ಜಿಲ್ಲೆ. ಮತ್ತು ಎ5) ಅಂಜುಮ್ ಬಾನು @ ಅಂಜುಮ್ ಬಾನು ಸಾಸರವಾಡ (22) ಹಾವೇರಿ ತಾ & ಜಿಲ್ಲೆ. ಇವರನ್ನು ಬಳಸಿಕೊಂಡು, ಬೈಕಿನ ಹಿಂದೆ ಕುಳಿತುಕೊಂಡು ಹೋಗುವ ಹೆಣ್ಣಮಕ್ಕಳನ್ನು ಟಾರ್ಗೇಟ್ ಮಾಡಿ, ಅವರ ಕೊರಳಲ್ಲಿದ್ದ ಸರಗಳನ್ನು ಕಳ್ಳತನ ಮಾಡಡುದ್ದನು.
ದಾವಣಗೆರೆ ಆಂಜನೇಯ ಬಡಾವಣೆಯ ಪಾರ್ಕಿನಲ್ಲಿ 7-8 ಸರಗಳ್ಳತನ ಮಾಡಲು ಸಂಚು ರೂಪಿಸಿ ದಿನಾಂಕ:-08/03/2026 ರಂದು ಭರಮಸಾಗರ ಬಳಿ ಬೈಕಿನ ಹಿಂಭಾಗ ಕುಳಿತಿದ್ದ ಮಹಿಳೆಯ ಸರಗಳ್ಳತನ ಮಾಡಿದ್ದನು.ನಂತರ ಹೊನ್ನಾಳಿ ತಾಲ್ಲೂಕು ಸೊರಟೂರು ಕ್ರಾಸ್ ಅಪ್ಪರ್ ತುಂಗಾ ಚಾನಲ್ ಹತ್ತಿರ ಹೊನ್ನಾಳಿ-ಶಿಕಾರಿಪುರ ರಸ್ತೆಯಲ್ಲಿ ಬೈಕಿನ ಹಿಂಭಾಗದ ಕುಳಿತಿದ್ದ ಮಹಿಳೆಯ ಸರಗಳ್ಳತನ ಮಾಡಿದ್ದನು. ನಂತರ ನ್ಯಾಮತಿ ತಾಲ್ಲೂಕು ಸವಳಂಗ ರಸ್ತೆಯ ಚಿನ್ನಿಕಟ್ಟೆಯ ಬಳಿ ಸರಗಳ್ಳತನಕ್ಕೆ ಪ್ರಯತ್ನಿಸಿದ್ದನು. ಆರೋಪಿತರುಗಳಿಂದ ಹೊನ್ನಾಳಿ ಠಾಣೆ, ಭರಮಸಾಗರ ಠಾಣೆ ಮತ್ತು ನ್ಯಾಮತಿ ಪೊಲೀಸ್ ಠಾಣೆಗಳ ತಲಾ ಒಂದೊಂದು ಪ್ರಕರಣದಂತೆ ಒಟ್ಟು 03 ಪ್ರಕರಣಗಳಿಗೆ ಸಂಬAಧಿಸಿದ ಅಂದಾಜು 2,12,200/- ರೂ ಮೌಲ್ಯದ ಎರಡು ಬಂಗಾರದ ಸರಗಳು ಮತ್ತು ರೂ.20 ಲಕ್ಷದ ಮೌಲ್ಯದ 2 ಕಾರ್ ಮತ್ತು 1 ಬೈಕನ್ನು ಅಂದಾಜು ಒಟ್ಟು 22.12,200/- ರೂ ಮೌಲ್ಯದ ಸ್ವತ್ತನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. ಪ್ರಕರಣದ ಆರೋಪಿತರುಗಳನ್ನು ಹಾಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಕಾನೂನು ಸಂಘರ್ಷಕ್ಕೋಳಗಾದ ಬಾಲಕನು ಸರ್ಕಾರಿ ವೀಕ್ಷಣಾಲಯ ಚಿತ್ರದುರ್ಗದಲ್ಲಿದ್ದಾನೆ.
ಅಇ ಸರಗಳ್ಳತನ ಪ್ರಕರಣಗಳಲ್ಲಿನ ಆರೋಪಿತರುಗಳನ್ನು ಪತ್ತೆ ಹಚ್ಚಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ತಂಡಕ್ಕೆ ಶೇಖರ್ ಹೆಚ್ ಟಿ ಹಾಗೂ ಎಎಸ್ಪಿ ಪರಮೇಶ್ವರ ಹೆಗಡೆ ಶ್ಲಾಘಿಸಿದ್ದಾರೆ.



