ದಾವಣಗೆರೆ: ಅಂತರ ಜಿಲ್ಲಾ ಬೈಕ್ ಕಳ್ಳನನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ. ಒಟ್ಟು 4.25 ಲಕ್ಷ ಮೌಲ್ಯದ 7 ಬೈಕ್, ಒಂದು ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಅಭಿಷೇಕ್.ಪಿ.ಎಂ ಎಂಬುವವರು 08-08-2025 ರಂದು ತಮ್ಮ ರಾಯಲ್ ಎನ್ ಫೀಲ್ಡ್ ಬೈಕ್ ಕಳ್ಳತನವಾದ ಬಗ್ಗೆ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಸ್ವತ್ತು ಮತ್ತು ಆರೋಪಿತರ ಪತ್ತೆ ಕಾರ್ಯಕ್ಕ ಡಿವೈಎಸ್ಪಿ ಬಿ.ಎಸ್.ಬಸವರಾಜ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ಇನ್ ಸ್ಪೆಕ್ಟರ್ ಆರ್.ಎಫ್.ದೇಸಾಯಿ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿರವರನ್ನೊಳಗೊಡ ತಂಡ ರಚಿಸಲಾಗಿತ್ಗು.
ಈ ತಂಡವು ಕಾರ್ಯಚರಣೆ ನಡೆಸಿದ್ದು, ಹರಿಹರ ನಗರದ ಹರಪನಹಳ್ಳಿ ರಸ್ತೆಯ ಇಂಡಸ್ಟ್ರೀಯಲ್ ಏರಿಯಾದಲ್ಲಿ ಗಸ್ತಿನಲ್ಲಿದ್ದಾಗ ಆರೋಪಿ ಅಪ್ಪು ನಾಗೇನಹಳ್ಳಿ @ ಅಬ್ಬು @ ಅಬ್ಬಾಸ್ ಅಲಿ, 35ವರ್ಷ, ರಾಣೆಬೆನ್ನೂರು ತಾಲೂಕ್, ಹಾವೇರಿ ಜಿಲ್ಲೆ ಈತನು ಕಳ್ಳತನ ಮಾಡಿದ ಟಾಟಾ ಏಸ್ ನಲ್ಲಿ ಬರುತ್ತಿದ್ದಾಗ ಪೊಲೀಸರನ್ನು ನೋಡಿ ಓಡಿ ಹೋಗುತ್ತಿದ್ದಾಗ ವಶಕ್ಕೆ ಪಡೆದು ವಿಚಾರಣೆ ಒಳಪಡಿಸಲಾಯಿತು.
ಈ ವೇಳೆ ಹರಿಹರ ನಗರ ಠಾಣೆ-01, ಹರಪನಹಳ್ಳಿ ಠಾಣೆ-02, ರಾಣೆಬೆನ್ನೂರು ನಗರ ಠಾಣೆ-02, ತುಮಕೂರು ಠಾಣೆ-01, ಹೊನ್ನಾಳಿ ಠಾಣೆ-01, ಹಾಗೂ ಚನ್ನಗಿರಿ ಠಾಣೆ-01 (ಟಾಟಾ ಏಸ್) ಒಟ್ಟು 08 ಪ್ರಕರಣಗಳು ಬೆಳಕಿಗೆ ಬಂದಿದ್ದು ಆರೋಪಿತನಿಂದ ಅಂದಾಜು 4,25,000/-ರೂ ಮೊತ್ತದ ವಿವಿಧ ಕಂಪನಿಯ 07 ದಿಚಕ್ರ ವಾಹನಗಳು ಮತ್ತು ಒಂದು ಟಾಟಾ ಏಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಪತ್ತೆಕಾರ್ಯದಲ್ಲಿ ಯಶಸ್ವಿಯಾದ ಎಸ್ಪಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.



