ದಾವಣಗೆರೆ: ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನ್ಯಾಮತಿ ಪೊಲೀಸರು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ದಾವಣಗೆರೆ: ವಿವಿಧ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ
ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಚಿ.ಕಡದಕಟ್ಟೆ ಗ್ರಾಮದ ಹಬೀಬುಲ್ಲಾ (55) ಬಂಧಿತ ಆರೋಪಿ. 2012ರಲ್ಲಿ ಪತ್ನಿ ಅಲ್ಮಾಸ್ಬಾನು ಜೊತೆ ಜಗಳವಾಡಿ, ತೀವ್ರವಾಗಿ ಹಲ್ಲೆ ಮಾಡಿ ಮನೆಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಅವರನ್ನು ಕೊಲೆ ಮಾಡಲು ಪ್ರಯತ್ನಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ದಾವಣಗೆರೆ: ಪೊಲೀಸರ ಭರ್ಜರಿ ಕಾರ್ಯಚರಣೆ; ಕಳ್ಳತನವಾಗಿದ್ದ 2.80 ಲಕ್ಷ ಬೆಲೆಯ 5 ಬೈಕ್ ವಶ
ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಎಲ್.ಪಿ.ಆರ್ ಪ್ರಕರಣ ಅಡಿಯಲ್ಲಿ ಆರೋಪಿಯನ್ನು ಶಿವಮೊಗ್ಗದ ಚಿಕ್ಕಲ್ 2ನೇ ಕ್ರಾಸ್ನಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಪಿಐ ಎನ್.ಎಸ್.ರವಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ಹೊಳಬಸಪ್ಪ ಹೋಳಿ, ಸಿಬ್ಬಂದಿ ಶಿವರಾಜ, ಪಂಪಾನಾಯ್ಕ ಪಾಲ್ಗೊಂಡಿದ್ದರು



