ದಾವಣಗೆರೆ: ಕೆಟಿಜೆ ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಳ್ಳತನವಾಗಿದ್ದ 2.80 ಲಕ್ಷ ಬೆಲೆಯ 5 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತೆ ಕುಸಿತ; ಎಷ್ಟಿದೆ ಇಂದಿನ ಕನಿಷ್ಟ, ಗರಿಷ್ಠ ದರ ..?
ಪಪ್ರಕಾಶ್ ಕುಮಾರ್ ಎಂಬುವವರು ತಮ್ಮ ಹೀರೋ ಹೊಂಡಾ ಫ್ಯಾಷನ್ ಪ್ರೋ ಬೈಕನ್ನು ದಿನಾಂಕ 21-02-2026 ರಂದು ಇ.ಎಸ್.ಐ ಆಸ್ಪತ್ರೆಗೆ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಹೋಗಲು ಆಸ್ಪತ್ರೆಯ ಕಾಂಪೌಂಡ್ ನಲ್ಲಿ ಬೈಕ್ ನಿಲ್ಲಿಸಿದ್ದರು. ಯಾರೋ ಬೈಕ್ ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡುವಙತೆ ಕೆಟಿಜೆ ನಗರ ಪೊಲೀಸ್ ಠಾಣಾ ಪ್ರಕರಣ ದಾಖಲಿದ್ದರು.
38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ಸಾಲ
ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕಶ್ರೀ. ಸುನೀಲ್ ಕುಮಾರ್. ಹೆಚ್.ಎಸ್. ನೇತೃತ್ವದಲ್ಲಿ ಪಿ.ಎಸ್.ಐ ಶ್ರೀಮತಿ ಲತಾ.ಆರ್. ಹಾಗೂ ಸಿಬ್ಬಂದಿಗಳನ್ನೋಳಗೊಂಡ ತಂಡ ಕಾರ್ಯಚರಣೆ ನಡೆಸಿದ್ದು, ಡಿ.ಸಿ.ಎಂ ಸರ್ಕಲ್ ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಅನುಮಾನಸ್ಪದವಾಗಿ ಕಂಡು ಬಂದ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದುಕೊಂಡುಕೂಲಂಕುಶವಾಗಿ ವಿಚಾರ ಮಾಡಿದಾಗ 1)ಕೆ.ಟಿಜೆ ನಗರ ಪೊಲೀಸ್ ಠಾಣೆಯ 4 ಬೈಕ್ ಕಳ್ಳತನ ಪ್ರಕರಣಗಳಲ್ಲಿ, 04 ಬೈಕ್ ಗಳು ಮತ್ತು 2) ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ 01 ಬೈಕ್ ಒಟ್ಟು 5 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಒಟ್ಟು 2,80,000/-ರೂ ಬೆಲೆಯ 05 ಬೈಕ್ ಗಳನ್ನು ವಶ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಮೇಲ್ಕಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಸಿದ್ದಪ್ಪ, ಮಂಜಪ್ಪ, ನಿಂಗರಾಜ್, ಹನುಮಂತಪ್ಪ, ಅನಿತಾ, ಸರಸ್ವತಿ ಅವರನ್ನು ಎಸ್ಪಿ, ಎಎಸ್ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



