ದಾವಣಗೆರೆ: ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೆ ಇಂದು (ಫೆ.16) ಬಾಂಬ್ ಬೆದರಿಕೆ ಮೇಲ್ ಬಂದಿದೆ. ಈ ದಾವಣಗೆರೆ ಜಿಲ್ಲಾ ಕೋರ್ಟ್ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳಿಗೂ ಸಹ ಇದೇ ರೀತಿ ಬಾಂಬ್ ಬೆದರಿಕೆ ಮೇಲ್ ಬಂದಿತ್ತು.
ದಾವಣಗೆರೆ: ದುರ್ಗಾಂಬಿಕ ದೇವಿ ಜಾತ್ರೆ; ಪೊಲೀಸ್ ಪಥ ಸಂಚಲನ
ಇಂದು ಮಧ್ಯಾಹ್ನ 12-30ಕ್ಕೆ RDX ಸ್ಫೋಟಿಸುವುದಾಗಿ ದಾವಣಗೆರೆ ಜಿಲ್ಲಾ ನ್ಯಾಯಾಧೀಶರಿಗೆ ಬೆದರಿಕೆ ಮೇಲ್ ಬಂದಿತ್ತು. ದಾವಣಗೆರೆಯ ಎರಡೂ ನ್ಯಾಯಾಲಯಗಳಲ್ಲಿ ಕಲಾಪ ಸ್ಥಗಿತ ಮಾಡಲಾಗಿತ್ತು.
ದಾವಣಗೆರೆ: ಹೂಡಿಕೆ ಮಾಡಿದ್ರೆ ಅಧಿಕ ಲಾಭದ ಆಸೆತೋರಿಸಿ ಮಹಿಳಾ ಟೆಕ್ಕಿಗೆ ಬರೋಬ್ಬರಿ 93 ಲಕ್ಷ ವಂಚನೆ
ಸುದ್ದಿ ತಿಳಿಯುತ್ತಿದ್ದಂತೆ ದಾವಣರೆಗೆ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಒಂದನೇ ಹೆಚ್ಷುವರಿ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಹಾಗೂ ವಕೀಲರು ತಕ್ಷಣ ಹೊರಬಂದರು. ಸಾರ್ವಜನಿಕರು ಒಳ ಬರದಂತೆ ಕೆಲ ಹೊತ್ತು ಕೋರ್ಟ್ ಆವರಣ ಗೇಟ್ ಗೆ ಬೀಗ ಹಾಕಲಾಗಿತ್ತು. ಕೋರ್ಟ್ ಗೆ ಪೊಲೀಸರಿಂದ ಬಿಗಿ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.



