ದಾವಣಗೆರೆ: ದಾವಣಗೆರೆ ಧೂಡಾ ಮಾಜಿ ಅಧ್ಯಕ್ಷನ ಪುತ್ರರು ಪೊಲೀಸರ ಮೇಲೆ ಹಲ್ಲೆ ಮಾಡಿದರೂ ಇನ್ನೂ ಕಠಿಣ ಕ್ರಮವಿಲ್ಲ. ದೆಹಲಿ ಹೈಕಮಾಂಡ್ ಆದೇಶದಂತೆ ಅಲ್ಪಸಂಖ್ಯಾತರು ಕಾನೂನಿಗಿಂತ ಮಿಗಿಲಾಗಿದ್ದಾರೆಯೇ? ಎಂದು ರಾಜ್ಯ ಬಿಜೆಪಿ ಘಟಕ ಸಾಮಾಜಿಕ ಜಾಲತಾಣದ ಆಕ್ರೋಶ ವ್ಯಕ್ತಪಡಿಸಿದೆ.
ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತಷ್ಟು ಕುಸಿತ; ಇಂದಿನ ಕನಿಷ್ಠ, ಗರಿಷ್ಠ ದರ ಎಷ್ಟಿದೆ…?
ಪೊಲೀಸರ ಮೇಲೆ ಹಲ್ಲೆ ನಡೆದರೂ ಸರ್ಕಾರಕ್ಕೆ ಮೌನವೇಕೆ?ಆರೋಪಿಗಳು ‘ಬ್ರದರ್ಸ್’ ಎಂಬ ಕಾರಣಕ್ಕಾಗಿಯೇ? ಸರ್ಕಾರ ನಿಮ್ಮ ‘ಬ್ರದರ್ಸ್’ ಗಳ ಆಶೀರ್ವಾದದಿಂದ ಬಂದಿದೆ ಎಂಬ ಕಾರಣಕ್ಕಾಗಿಯೇ? ಎಂದು ಪ್ರಶ್ನಿಸಿದೆ.

ಹಾವು, ಮುಂಗುಸಿಯಂತೆ ಪರಸ್ಪರ ಟೀಕೆ, ನಿಂದನೆ ಕೈ ಬಿಡಿ; ಸಿದ್ದೇಶ್ವರ-ಮಲ್ಲಿಕಾರ್ಜುನ್-ಹರೀಶ್ಗೆ ತರಳಬಾಳು ಶ್ರೀ ಸೂಚನೆ
ಸಾಮಾನ್ಯ ಜನರ ರಕ್ಷಣೆ ಮಾಡಬೇಕಾದ ಇಲಾಖೆಯ ನೈತಿಕ ಸ್ಥೈರ್ಯವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಲಿ ಕೊಡಬೇಡಿ. ಇದು ಓಲೈಕೆಯ ಪರಮಾವಧಿ! ಧಿಕ್ಕಾರವಿರಲಿ ಎಂದು ಹೇಳಿದೆ ಕರ್ನಾಟಕ ಬಿಜೆಪಿ ಎಕ್ಸ್ ಖಾತೆಯಲ್ಲಿ ಫೋಸ್ಟ್ ಮಾಡಿದೆ.
ಘಟನೆ ಹಿನ್ನೆಲೆ
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಆಪ್ತ,
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ಧೂಡಾ) ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಅವರ ಪುತ್ರರು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆ ಜಿಲ್ಲೆಯಲ್ಲಿ ಮಾತ್ರವಲ್ಲಿ ರಾಜ್ಯದಲ್ಲಿ ಸಂಚಲನ ಮೂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ‘ವೋಟ್ ಬ್ಯಾಂಕ್’ ರಾಜಕಾರಣಕ್ಕಾಗಿ ಮತ್ತು ಬ್ರದರ್ಸ್ ಎಂಬ ಕಾರಣಕ್ಕಾಗಿಯೇ? ಸುಮ್ಮನಿದೆ ಎಂದು ಬಂದ ಬಿಜೆಪಿ ಟೀಕಿಸಿದೆ.
ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಆಪ್ತ ಪುತ್ರನ ವಿರುದ್ಧ 2 ಠಾಣೆಯಲ್ಲಿ 4 ಪ್ರಕರಣ ದಾಖಲು-ಇಬ್ಬರು ಆರೋಪಿಗಳ ಬಂಧನ
ಪೊಲೀಸರ ಮೇಲೆಯೇ ಹಲ್ಲೆ
ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಪು ಘರ್ಷಣೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಪೊಲೀಸರು ಅಯೂಬ್ ಪೈಲ್ವಾನ್ ಅವರ ಮನೆಗೆ ತೆರಳಿದ್ದರು. ಈ ವೇಳೆ ಅಯೂಬ್ ಪೈಲ್ವಾನ್ ಪುತ್ರರಾದ ಹಸನ್ ಮತ್ತು ಹುಸೇನ್, ಮಹಿಳಾ ಇನ್ ಸ್ಪೆಕ್ಟರ್ ಗಾಯತ್ರಿ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸರ ಮೊಬೈಲ್ ಕಿತ್ತುಕೊಂಡು ಹಲ್ಲೆಗೆ ಯತ್ನಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು, ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ಒಟ್ಟು 04 ಪ್ರಕರಣಗಳು ದಾಖಲಾಗಿವೆ. ಒಟ್ಟು ಇಬ್ಬರ ಬಂಧನ ಮಾಡಿದ್ದು, ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.



