ದಾವಣಗೆರೆ: ಆತ್ಮಹತ್ಯೆಗೆ ಪ್ರಯತ್ನಿಸಿದ ಯುವತಿಯನ್ನು ನ್ಯಾಮತಿಯ 112 ಪೊಲೀಸರು ರಕ್ಷಣೆ ಮಾಡಿದ್ದಾರೆ.
ದಾವಣಗೆರೆ: ಚಿನ್ನದ ವ್ಯಾಪಾರಿಗಳ ಜತೆ ಸೇರಿ ದರೋಡೆ; ಒಬ್ಬ ಪಿಎಸ್ ಐ ಅಮಾನತ್ತು, ಇನ್ನೊಬ್ಬ ವಜಾ ಮಾಡಿ ಆದೇಶ
ದಿನಾಂಕ: 26-11-2025 ರಂದು ಬೆಳಗಿನ ಜಾವ ಸಮಯದಲ್ಲಿ ಯಾವುದೋ ಕಾರಣಕ್ಕೆ ಶಿವಮೊಗ್ಗ ಜಿಲ್ಲೆಯ ಮನನೊಂದ ಯುವತಿಯೋರ್ವಳು ಕೊಡತಾಳ ಕ್ರಾಸ್ ಬಳಿ ಇರುವ ಕೆರೆಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ಬಗ್ಗೆ 112 ಅಧಿಕಾರಿಗಳಿಗೆ ಮಾಹಿತಿ ಬಂದಿದ್ದು, ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ 112 ಕರ್ತವ್ಯಾಧಿಕಾರಿ ಬಸವರಾಜ್ ಹಾಗೂ ಮಂಜಪ್ಪ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ.
ದಾವಣಗೆರೆ-ಮಂತ್ರಾಲಯ ಎಸಿ ವೋಲ್ವೊ ಬಸ್ ಸೌಲಭ್ಯಕ್ಕೆ ಸಂಸದೆ ಚಾಲನೆ; ಸಮಯ, ಮಾರ್ಗ, ದರ ಪಟ್ಟಿ ಮಾಹಿತಿ ಇಲ್ಲಿದೆ..
ನೊಂದ ಸಂತ್ರಸ್ತೆಯ ಮಾಹಿತಿ ಪಡೆದು ಸಮಸ್ಯೆಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವುದೇ ಪರಿಹಾರವಲ್ಲ, ಮನಸ್ಥೈರ್ಯ ತುಂಬಿ ಸೂಕ್ತ ತಿಳುವಳಿಕೆ ನೀಡಿರುತ್ತಾರೆ ನಂತರ ನ್ಯಾಮತಿ ಠಾಣೆಗೆ ಮಾಹಿತಿ ನೀಡಿ, ಸಂತ್ರಸ್ತೆಯ ಕಡೆಯವರಿಗೆ ಸಂಪರ್ಕಿಸಿ, ಕರೆಯಿಸಿ ಸೂಕ್ತ ತಿಳುವಳಿಕೆ ನೀಡಿ ಕಳುಹಿಸಿದ್ದಾರೆ.
ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಯುವತಿಯ ರಕ್ಷಣೆ ಮಾಡಿದ 112 ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಅಧೀಕ್ಷಕರವರು ಪ್ರಶಂಸಿದ್ದಾರೆ. ಯಾವುದೇ ತುರ್ತು ಸೇವೆಗೆ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಲು ಸೂಚಿಸಲಾಗಿದೆ.



