ದಾವಣಗೆರೆ: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿನಿಂದ 1.10 ಲಕ್ಷ ಮೌಲ್ಯದ 1 ಕೆಜಿ, 210 ಗ್ರಾಂನಷ್ಟು ಗಾಂಜಾ, ಹಾಗೂ ಅಂದಾಜು 1,50,000 ರೂಪಾಯಿ ಬೆಲೆ ಬಾಳುವ ಬೈಕ್ ವಶಪಡಿಸಿಕೊಳ್ಳಲಾಗಿದೆ.
ದಿನಾಂಕ:-25-05-2025 ರಂದು ದಾವಣಗೆರೆ ನಗರದ ಕೆ.ಟಿ.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಣೀಶ್ ಲೇಔಟ್ ಒಳಗಡೆ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಎಎಸ್ಪಿಗಳಾದ ವಿಜಯಕುಮಾರ್ ಎಂ ಸಂತೋಷ್ , ಜಿ. ಮಂಜುನಾಥ್, &ಡಿವೈಎಸ್ಪಿ ಶರಣಬಸವೇಶ್ವರ, ಬಿ. ಮಾರ್ಗದರ್ಶನದಲ್ಲಿ ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ, ಹೆಚ್.ಎಸ್ ನೇತೃತ್ವದಲ್ಲಿ ಪಿ.ಎಸ್.ಐ ಲತಾ, ಆರ್. ಹಾಗೂ ಸಿಬ್ಬಂದಿಯವರಾದ ಈಶ್ವರ್, ಸುರೇಶ್ಬಾಬು, ಮಂಜನಗೌಡ, ಸಂಗಮೇಶ್, ನಾಗೇಶ್ನಾಯ್ಕ್, ನಾಗರಾಜ್, ಗಿರೀಶ್ಗೌಡ, ಮಂಜಪ್ಪ, ಹನುಮಂತಪ್ಪ, ಹನುಮಂತಪ್ಪ, ಅಮರೇಶ್ರವರನ್ನು ಒಳಗೊಂಡ ತಂಡ ದಾಳಿಮಾಡಿದೆ. ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿ ಸೈಯಾದ್ ಶುಜಾದ್ದೀನ್ @ ಅದಿಲ್ (24) , ಬಾಟಾ ಶೋರೂಮ್ನಲ್ಲಿ ಕೆಲಸ, ವಾಸ: ಬೂದಾಳ್ ರಸ್ತೆ, ಸೈಯಾದ್ ಲೇಔಟ್, ದಾವಣಗೆರೆ. ಈತನನ್ನು ಬಂಧಿಸಿದ್ದು,ಆರೋಪಿನಿಂದ 1.10 ಲಕ್ಷ ಮೌಲ್ಯದ 1 ಕೆಜಿ, 210 ಗ್ರಾಂನಷ್ಟು ಗಾಂಜಾ, ಹಾಗೂ ಅಂದಾಜು 1,50,000/- ರೂಪಾಯಿ ಬೆಲೆ ಬಾಳುವ YAMAHA ಕಂಪನಿಯ R15 ಮೋಟಾರ್ ಸೈಕಲ್, ಇತರೆ ವಸ್ತುಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.
ಆರೋಪಿ ಸೈಯಾದ್ ಶಾಜುದ್ದೀನ್ ಮತ್ತು ಸಲ್ಮಾನ್ಖಾನ್ ವಿರುದ್ಧ ದಾವಣಗೆರೆ ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದರಿ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಎಸ್ಪಿ ಉಮಾ ಪ್ರಶಾಂತ್ ಪ್ರಶಂಶಿಸಿದ್ದಾರೆ.



