Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಮರಕ್ಕೆ ಕಟ್ಟಿ ಹಾಕಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ; 9 ಆರೋಪಿಗಳ ಬಂಧನ

crime sym

ಚನ್ನಗಿರಿ

ದಾವಣಗೆರೆ: ಅಡಿಕೆ ಮರಕ್ಕೆ ಕಟ್ಟಿ ಹಾಕಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ; 9 ಆರೋಪಿಗಳ ಬಂಧನ

ದಾವಣಗೆರೆ: ಅಡಿಕೆ ಮರಕ್ಕೆ ಕಟ್ಟಿ ಹಾಕಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪ‌ ಹಿನ್ನೆಲೆ 9 ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಏ. 05ರಂದು ಓರ್ವ ಯುವಕನ್ನು ಅಡಿಕೆ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಕೂಡಲೇ ಚನ್ನಗಿರಿ ಪೊಲೀಸರು ಕಾರ್ಯಪ್ರವೃತ್ತರಾಗಿ ಈ ವಿಡಿಯೋಗಳನ್ನು ಪರಿಶೀಲಿಸಿ ಚನ್ನಗಿರಿ ತಾ. ಅಸ್ತಾಪನಹಳ್ಳಿಯಲ್ಲಿ ನಡೆದಿರುವ ಬಗ್ಗೆ ಪತ್ತೆ ಹಚ್ಚಲಾಗಿರುತ್ತದೆ. ನಂತರ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಬೇಟಿ ನೀಡಿ ಪರಿಶೀಲಿಸಿದ್ದು, ಘಟನೆ ಬಗ್ಗೆ ಖಚಿತವಾಗಿರುತ್ತದೆ.

ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿ ಗ್ರಾಮದ ಅಪ್ರಾಪ್ತ ಬಾಲಕ, ಅದೇ ಗ್ರಾಮದಲ್ಲಿ ಸಣ್ಣ ಪುಟ್ಟ ಕಳ್ಳತನ ಮಾಡಿದ್ದನು. ಈ ಆರೋಪ ಹಿನ್ನೆಲೆ ಗ್ರಾಮಸ್ಥರು ಹಲವಾರು ಬಾರಿ ಬುದ್ದಿವಾದ ಮತ್ತು ತಿಳುವಳಿಕೆ ಹೇಳಿದರೂ, ಬಾಲಕನು ತನ್ನ ವರ್ತನೆಯಲ್ಲಿ ಬದಲಾವಣೆ ಮಾಡಿಕಿಂಡಿರುವುದಿಲ್ಲ.

ದಿನಾಂಕ: 01-04-2025 ರಂದು ರಾತ್ರಿ ಸುಮಾರು 11-30 ಗಂಟೆಗೆ ನಮ್ಮ ಗ್ರಾಮದ ದರ್ಶನ್ ಎಂಬುವವರ ಮನೆಗೆ ಕಳ್ಳತನ ಮಾಡಲು ಹೋಗಿದ್ದ ಸಮಯದಲ್ಲಿ ವಿಚಾರವನ್ನು ತಿಳಿದುಕೊಂಡು ಹಿಡಿದುಕೊಳ್ಳಲು ಹೋದಾಗ ಬಾಲಕನು ಅಲ್ಲಿಂದ ತಪ್ಪಿಸಿಕೊಂಡು ಹೊಡಿಹೋಗಿರುತ್ತಾನೆ. ಮರು ದಿನ ದಿನ ಮಧ್ಯಾಹ್ನ ಸಮುಯದಲ್ಲಿ ಬಾಲಕನನ್ನು ಹಿಡಿದುಕೊಂಡು ಹೋಗಿ ನಲ್ಲೂರು ಗ್ರಾಮದ ಜಾಕೀರ್ ಇವರ ತೋಟದ ಕರೆದುಕೊಂಡು ಹೀಗಿದ್ದಾರೆ. ಅಡಿಕೆ ಮರಕ್ಕೆ ತೋಟದಲ್ಲಿದ್ದ ಡ್ರಿಪ್ ವೈರ್‌ನಿಂದ ಕಟ್ಟುಹಾಕಿದ್ದಾರೆ. ನಂತರ ಆರೋಪಿಗಳು ಡ್ರಿಪ್ ವೈರನಿಂದ ನನ್ನ ಅಪ್ರಾಪ್ತ ಮೊಮ್ಮಗನಿಗೆ ಹೊಡೆದು ಅವಾಚ್ಯವಾಗಿ ಬೈಯ್ದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಾಲಕನ ಅಜ್ಜ ಮಧುಸುದನ್ (54) ಚನ್ನಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ಆರೋಪಿತರ ಪತ್ತೆ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಹಾಗೂ ಎಎಸ್ಪಿ ಸಂತೋಷ್ ವಿಜಯ್ ಕುಮಾರ್, ಮಂಜುನಾಥ ಚನ್ನಗಿರಿ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನಲ್ಲಿ ಚನ್ನಗಿರಿ ಪೊಲೀಸ್ ನಿರೀಕ್ಷಕ ರವೀಶ್ ನೇತೃತ್ವದಲ್ಲಿ ಚನ್ನಗಿರಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ತಂಡ ರಚನೆ ಮಾಡವಾಗಿತ್ತು. ಈ ತಂಡ ದಿನಾಂಕ: 06-04-2025 ರಂದು ಆರೋಪಿತರುಗಳಾದ 01) ಸುಭಾಷ್ (21) 02) ಲಕ್ಕಿ‌(20) 03) ಪರುತು (25) 04) ದರ್ಶನ್ (22), 5) ಶಿವದರ್ಶನ್ (20) 6) ಹರೀಶ್ ಬಿನ್ ಗಿರೀಶ್, 7) ಪಟ್ಟಿ  8) ಭೂಣಿ 9) ಸುದನ್ ‌ಇವರನ್ನು ಪತ್ತೆ ಮಾಡಿ ಬಂಧನ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

To Top