Connect with us

Dvgsuddi Kannada | online news portal | Kannada news online

ದಾವಣಗೆರೆ: ಲಾಕರ್ ನಲ್ಲಿ ಇಟ್ಟಿದ್ದ 7,43 ಲಕ್ಷ ಕಳವು; ಪ್ರಕರಣ ದಾಖಲಾಗಿ 24 ಗಂಟೆಗಳಲ್ಲಿಯೇ ಆರೋಪಿ ಬಂಧನ-ನಗದು ವಶ

ದಾವಣಗೆರೆ

ದಾವಣಗೆರೆ: ಲಾಕರ್ ನಲ್ಲಿ ಇಟ್ಟಿದ್ದ 7,43 ಲಕ್ಷ ಕಳವು; ಪ್ರಕರಣ ದಾಖಲಾಗಿ 24 ಗಂಟೆಗಳಲ್ಲಿಯೇ ಆರೋಪಿ ಬಂಧನ-ನಗದು ವಶ

ದಾವಣಗೆರೆ: ನಾರಾಯಣ ಹೃದಯಾಲಯದ ಆಸ್ಪತ್ರೆ ಲಾಕರ್ ನಲ್ಲಿ ಇಟ್ಟಿದ್ದ 7,43 ಲಕ್ಷ ಕಳವು ಪ್ರಕರಣ ದಾಖಲಾಗಿ 24 ಗಂಟೆಗಳಲ್ಲಿಯೇ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ ಕಳ್ಳತನವಾಗಿದ್ದ ನಗದು ಹಣ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದಾವಣಗೆರೆ: ಕಿರಾಣಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ; ಅಂಗಡಿ ಸಂಪೂರ್ಣ ಸುಟ್ಟು ಭಸ್ಮ

ನಾರಾಯಣ ಹೃದಯಾಲಯದಲ್ಲಿ ಫೆ. 22 ರಂದು ಸಂಜೆ 5.45 ಗಂಟೆಗೆ ನಮ್ಮ ಅಕೌಂಟ್ಸ್ ವಿಭಾಗದ ಮೋಹನ, ಆ ದಿನ ರೋಗಿಗಳಿಂದ ಸಂಗ್ರಹವಾದ ಹಣವನ್ನು ನಮ್ಮ ಅಕೌಂಟ್ಸ್ ರೂಮಿನ ಗಾಡ್ರೇಜ್ ಬೀರುವನಲ್ಲಿ ಲಾಕರ್ ನಲ್ಲಿ ಇಟ್ಟು ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ನಂತರ ದಿ:24.02.2025 ರಂದು ಬೆಳಿಗ್ಗೆ 9.00 ಗಂಟೆಗೆ ಆಪೀಸಿಗೆ ಬಂದು ಬೀಗ ತೆಗೆದು ಒಳಗೆ ಹೋದಾಗ ಅಕೌಂಟ್ಸ್ ರೂಮಿನ ಬಾಗಿಲು ಬೀಗ ಮುರಿದಿದ್ದು, ಮೋಹನ ರವರು ಒಳಗೆ ಹೋಗಿ ಗಾಡ್ರೇಜ್ ಬೀರುವನ್ನು ಚೆಕ್ ಮಾಡಿ ನೋಡಿದಾಗ ಗಾಡ್ರೇಜ್ ಬೀರುವಿನ ಬಾಗಿಲು ತೆಗೆದಿದ್ದು, ಲಾಕರ್‌ನಲ್ಲಿ ಇಟ್ಟಿದ್ದ 7,43,626/-ರೂ ಹಣ ಕಾಣಿಸಲಿಲ್ಲ.

ಆಗ ಪೆಸಿಲಿಟಿ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಸುನಿಲ್ ಭಂಡಾರಿ ಮಾಹಿತಿ ನೀಡಿದ್ದು, ಅಕೌಂಟ್ಸ್ ರೂಮಿಗೆ ಹೋಗಿ ನೋಡಿದಾಗ ಗಾಡ್ರೇಜ್ ಬೀರುವಿನ ಬಾಗಿಲು ತೆರೆದಿದ್ದು, ಗಾಡ್ರೇಜ್ ನಲ್ಲಿ ಇಟ್ಟಿದ್ದ ಲಾಕರ್ ಬಾಗಿಲು ಓಪನ್ ಆಗಿರುವುದು ಕಂಡು ಬಂದಿತು. ಅದರಲ್ಲಿ ಇಟ್ಟಿದ್ದ ನಗದು ಹಣ ಕಾಣಿಸಲಿಲ್ಲ. ಯಾರೋ ಕಳ್ಳರು ಅಕೌಂಟ್ಸ್ ರೂಮಿನ ಬಾಲ್ಕನಿ ಬಾಗಿಲನ್ನು ಯಾವುದೋ ಆಯುಧದಿಂದ ಮುರಿದು ರೂಮಿನ ಒಳಗೆ ಪ್ರವೇಶ ಮಾಡಿ ಲಾಕರನಲ್ಲಿ ಇಟ್ಟಿದ್ದ 7,43,626/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಅಂತ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳನ್ನು ಪತ್ತೆ ಮಾಡಲು ಎಸ್ಪಿ ಉಮಾ ಪ್ರಶಾಂತ , ಎಎಸ್ಪಿ ವಿಜಯಕುಮಾರ.ಎಂ. ಸಂತೋಷ್, ಎಮ್.ಮಂಜುನಾಥ, ಡಿವೈಎಸ್ಪಿ ಶರಣ ಬಸವೇಶ್ವರ ಬಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್ ಹಾಗೂ ಪಿ.ಎಸ್.ಐ ವಿಜಯ ಎಮ್ & ನಾಗರಾಜ ಹಾಗು ಸಿಬ್ಬಂದಿಗಳಾದ ಶಂಕರ್ ಜಾಧವ್, ಆನಂದ ಎಮ್, ಚಂದ್ರಪ್ಪ, ಬೋಜಪ್ಪ, ರವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.

ಪ್ರಕರಣದಲ್ಲಿ ಆರೋಪಿ‌ಎಸ್ ಷರೀಪ್ ಸಾಬ್ (33) ವಾಸ ಬಳ್ಳೂರು ಗ್ರಾಮ ದಾವಣಗೆರೆ ತಾ ಈತನನ್ನು ಬಂಧಿಸಿದ್ದು, ಆರೋಪಿತನಿಂದ ಕಳ್ಳತನ ಮಾಡಿದ 7,36,630/- ರೂ ನಗದು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. ಸದರಿ ಆರೋಪಿತನನ್ನು ಪತ್ತೆ ಮಾಡುವಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಇನ್ಸಪೆಕ್ಟರ್ ಇಸ್ಮಾಯಿಲ್ ಬಿ ಹಾಗು ಸಿಬ್ಬಂದಿಗಳಾದ ನಾಗರಾಜ ಕುಂಬಾರ ಹಾಗು ವಿರೇಶ ಒಳಗೊಂಡ ತಂಡವು ಸಹಕಾರ ನೀಡಿರುತ್ತದೆ.

ಸದರಿ ಪ್ರಕರಣದ ಆರೋಪಿತ ಪತ್ತೆ ಹಾಗೂ ಸ್ವತ್ತನ್ನು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top